Advertisement

ನಕ್ಸಲ್‌ ವಿಷಯದಲ್ಲಿ ಮಧ್ಯಸ್ಥಿಕೆ ಗೆ ಸಿದ್ಧ: ಅಣ್ಣಾ ಹಜಾರೆ

05:38 PM May 05, 2019 | Vishnu Das |

ಅಹ್ಮದ್‌ನಗರ: ನಕ್ಸಲ್‌ ಸಮಸ್ಯೆಯನ್ನು ಗುಂಡಿನ ಬದಲಿಗೆ ಮಾತುಕತೆಯ ಮೂಲಕ ಬಗೆಹರಿಸಬಹುದಾಗಿದೆ. ಸರಕಾರ ಅನುಮತಿ ನೀಡಿದಲ್ಲಿ ನಾನು ಸರಕಾರ ಮತ್ತು ನಕ್ಸಲರ ನಡುವೆ ಮಧ್ಯಸ್ಥಿಕೆ ನಡೆಸಲು ಕೂಡ ಸಿದ್ಧನಾಗಿದ್ದೇನೆ ಎಂದು ಸಮಾಜಸೇವಕ ಅಣ್ಣಾ ಹಜಾರೆ ಹೇಳಿದ್ದಾರೆ.

Advertisement

ಸಮಸ್ಯೆಗಳು ಪ್ರತಿಯೊಬ್ಬರಿಗೂ ಇರುತ್ತವೆ. ಆದರೆ, ಆ ಸಮಸ್ಯೆಗಳನ್ನು ಪರಿಹರಿಸುವ ವಿಧಾನವು ಸರಿಯಾಗಿರಬೇಕು ಎಂದು ಹಜಾರೆ ನುಡಿದಿದ್ದಾರೆ. ಸ್ಫೋಟ, ಗುಂಡಿನ ದಾಳಿ ಮತ್ತು ಅಮಾಯಕ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳುವುದರಿಂದ ಸಮಸ್ಯೆಗಳು ಬಗೆಹರಿಯಲ್ಲ. ಪ್ರತಿಯೊಂದು ಸಮಸ್ಯೆಗೂ ಬಂದೂಕು ಪರಿಹಾರವಲ್ಲ. ಇದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ ಎಂದರು.

ಮಾನವೀಯತೆಯ ದೃಷ್ಟಿಯಿಂದ ನೋಡಬೇಕು
ಇಂತಹ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಮಾತುಕತೆಗೆ ಕತ್ತಿ ಕೂಡ ಬಾಗುತ್ತದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈ ಪರಂಪರೆಯನ್ನು ನಾವು ಮರೆಯಬಾರದು. ನಾವು ಸಮಸ್ಯೆಯನ್ನು ಮಾನವೀಯತೆಯ ದೃಷ್ಟಿಯಿಂದ ನೋಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next