Advertisement

Ankola; ಗಂಗಾವಳಿಯಲ್ಲಿ ಶವಗಳಿಗಾಗಿ ಶೋಧ: ಮರಗಳ ತೆರವು

09:10 PM Aug 16, 2024 | Team Udayavani |

ಅಂಕೋಲಾ: ಶಿರೂರು ಗುಡ್ಡಕುಸಿತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು ನದಿಯಲ್ಲಿ ಬಿದ್ದಿರುವ ಮರಗಳನ್ನು ತೆರವು ಮಾಡಲಾಗುತ್ತಿದೆ.

Advertisement

ಶುಕ್ರವಾರ ನೌಕಾಪಡೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ನದಿಯಲ್ಲಿ ಕಾರ್ಯಾಚರಣೆ ನಡೆಸಿದೆ. ನದಿಯಲ್ಲಿ ಸಂಗ್ರಹವಾಗಿರುವ ಮಣ್ಣಿನಡಿ ಮೂವರ ಮೃತದೇಹಗಳನ್ನು ಪತ್ತೆ ಹಚ್ಚಲು ಅಡ್ಡಿಯಾಗಿರುವ ಮರಗಳ ತೆರವು ಕಾರ್ಯ ನಡೆಸಲಾಗುತ್ತಿದೆ.

ನದಿಯಲ್ಲಿ ಸಣ್ಣಪುಟ್ಟ ಮರಗಳ ಜತೆ ಭಾರೀ ಗಾತ್ರದ 2 ಆಲದ ಮರವೂ ಇದ್ದು ಅದರಡಿ ಲಾರಿ ಅಥವಾ ಮೃತದೇಹ ಇರಬಹುದಾದ ಶಂಕೆ ವ್ಯಕ್ತಪಡಿಸಲಾಗಿದೆ.ಈ ಮಧ್ಯೆ ನದಿಯಾಳದಲ್ಲಿ ಲಾರಿಗಳ ಕೆಲವು ಭಾಗಗಳು ಪತ್ತೆಯಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next