Advertisement

ಅಂಕೋಲಾ: ಪದ್ಮಶ್ರೀಗಳನ್ನು ಭೇಟಿಯಾದ ನಿರ್ಗಮಿತ ಎಸ್ಪಿ

03:49 PM Nov 06, 2022 | Team Udayavani |

ಅಂಕೋಲಾ: ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಇಂದು ಜಿಲ್ಲೆಯ ಇಬ್ಬರು ಪದ್ಮಶ್ರೀಗಳನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

Advertisement

ಜಾನಪದ ಕಲಾವಿದೆ ಸುಕ್ರಿ ಗೌಡ ಹಾಗೂ ವೃಕ್ಷ‌ ಮಾತೆ ತುಳಸಿ ಗೌಡ ಅವರನ್ನ ಅವರ ಮನೆಯಲ್ಲಿ ಭೇಟಿಯಾದ ಡಾ.ಪೆನ್ನೇಕರ್, ಈರ್ವರೊಂದಿಗೂ ಆತ್ಮೀಯವಾಗಿ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದರು.

ಇಬ್ಬರೂ ಪದ್ಮಶ್ರೀಗಳೂ ಕೂಡ ಇನ್ನಷ್ಟು ದಿನ ಜಿಲ್ಲೆಯ ಜನಕ್ಕೆ ತಮ್ಮ‌ ಸೇವೆ ಬೇಕಿತ್ತು ಎಂದು ಆಶಿಸಿದರು. ಸರ್ಕಾರದ ಆದೇಶದಂತೆ ಬೆಂಗಳೂರಿನ ಸಿಐಡಿಗೆ ವರ್ಗಾವಣೆಗೊಂಡಿದ್ದೇನೆಂದು ಡಾ.ಪೆನ್ನೇಕರ್ ಅವರು ತಿಳಿಸಿದಾಗ, ಬೆಂಗಳೂರಿಗೆ ಬಂದಾಗ ತಮ್ಮನ್ನು ಭೇಟಿಯಾಗುತ್ತೇವೆಂದು ಇಬ್ಬರೂ ತಿಳಿಸಿದ್ದಾರೆ.

ಈ ಹಿಂದೆ ಡಾ.ಪೆನ್ನೇಕರ್ ಅವರ ವರ್ಗಾವಣೆಗೆ ಕಸರತ್ತು ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಾಗ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಇಬ್ಬರೂ ಪತ್ರಿಕಾಗೋಷ್ಠಿಯಲ್ಲಿ ವರ್ಗಾವಣೆ ಮಾಡದಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next