Advertisement

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

08:00 PM Jul 07, 2022 | Team Udayavani |

ಅಂಕೋಲಾ : ಕೊಟ್ಟ ಮಾತಿಗೆ ತಪ್ಪಿದ ಪತಿಯ ವರ್ತನೆಗೆ ಮನನೊಂದ ಸತಿ ವಿಷ ಸೇವಿಸಿ ಇಹಲೋಕವನ್ನೇ ತ್ಯಜಿಸಿದ ಘಟನೆ ತಾಲೂಕಿನ ಗುಂಡಬಾಳದ ನೆವಳಸೆಯಲ್ಲಿ ನಡೆದಿದೆ.

Advertisement

ಜಯಂತಿ ಸತೀಶ ಗೌಡ (32) ಮೃತ ದುರ್ದೈವಿಯಾಗಿದ್ದಾಳೆ. ಜಯಂತಿ ಗೌಡ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡಿತ್ತಿದ್ದಳು. ಈಕೆಯ ಪತಿ ಸತೀಶ ಗೌಡ ವಿಪರೀತವಾಗಿ ಸಾರಾಯಿ ಕುಡಿಯುತ್ತಿದ್ದ. ಪತಿ ಸಾರಾಯಿ ಕುಡಿಯುವದು ಸುಶಿಕ್ಷಿತ ಕುಟುಂಬದಿಂದ ಬಂದ ಜಯಂತಿಗೆ ಇಷ್ಟವಿರಲಿಲ್ಲ.

ಅದೆಷ್ಟೋ ಸಲ ಸಾರಾಯಿ ಕುಡಿಯಬೇಡ ಎಂದು ವಿನಂತಿಸಿಕೊಂಡಿದ್ದಳು. ಇತ್ತೀಚೆಗೆ ಇನ್ನು ಮುಂದೆ ಸಾರಾಯಿ ಕುಡಿಯುವದಿಲ್ಲ ಎಂದು ಗಂಡನಿಂದ ಆಣೆ ಪ್ರಮಾಣ ಮಾಡಿಸಿದ್ದಳು. ಕೆಲವು ಕಾಲ ಸಾರಾಯಿ ಕುಡಿಯುವದನ್ನು ಬಿಟ್ಟು ಸರಿಯಾಗಿಯೇ ಇದ್ದ ಸತೀಶ ಕೆಲ ದಿನಗಳಿಂದ ಮತ್ತೆ ಕುಡಿಯಲು ಶುರುಮಾಡಿದ್ದ. ಇದರಿಂದ ಮನನೊಂದ ಜಯಂತಿ ಜುಲೈ.1 ರಂದು ಮನೆಯಲ್ಲಿದ್ದ ಇಲಿ ಪಾಷಾಣವನ್ನು ಸೇವಿಸಿದ್ದಳು.

ತೀರ ಅಸ್ವಸ್ಥಗೊಂಡ ಜಯಂತಿಯನ್ನು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಜುಲೈ.7 ಗುರುವಾರ ಇಹಲೋಕವನ್ನು ತ್ಯಜಿಸಿದ್ದಾಳೆ. ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕೃಷ್ಣೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು; ಜನ ಜಾಗೃತರಾಗಲು ಸೂಚನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next