Advertisement

ಸೀತೆಯ ಮೂಗುತಿ ಬಿದ್ದಿದ್ದು ಎಲ್ಲಿ?

06:37 PM Aug 30, 2019 | Sriram |

ಅದು ಶ್ರೀರಾಮನ ವನವಾಸದ ಸಂದರ್ಭ. ಕಾವೇರಿ ನದಿಯ ತೀರದಲ್ಲಿ ಸೀತೆ ಸ್ನಾನ ಮಾಡುತ್ತಿರುವಾಗ, ಆಕೆಯ ಮೂಗುತಿ ನೀರೊಳಗೆ ಬೀಳುತ್ತದೆ. ಶ್ರೀರಾಮನಿಗೆ ಈ ವಿಚಾರ ತಿಳಿದು, ಹನುಮಂತನಿಗೆ ಮೂಗುತಿ ಹುಡುಕಿಕೊಡುವಂತೆ ಮನವಿ ಮಾಡುತ್ತಾನೆ. ಆಂಜನೇಯ ತನ್ನ ಬಾಲವನ್ನು ನೀರಿನಲ್ಲಿ ರೊಂಯ್ಯನೆ ತಿರುಗಿಸಿದಾಗ, ಮೂಗುತಿ ಕಾಣಿಸಿಕೊಳ್ಳುತ್ತದೆ. ಅದನ್ನು ಸೀತೆಗೆ ಒಪ್ಪಿಸುತ್ತಾನೆ. ಮೂಗುತಿಯನ್ನು ಎತ್ತಿಕೊಟ್ಟಿದ್ದಕ್ಕಾಗಿ, ಹನುಮಂತನಿಗೆ “ಮುತ್ತೆತ್ತರಾಯ’ ಎಂಬ ಹೆಸರು ಬರುತ್ತದೆ. ಈ ಸ್ಥಳವೇ ಮುತ್ತತ್ತಿ ಆಯಿತು ಎಂಬುದು ಪ್ರತೀತಿ. ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಈಗಲೂ ಆಂಜನೇಯ ದೇಗುಲವಿದ್ದು, ಹನುಮಂತ ಬಾಲ ತಿರುಗಿಸಿದ “ತಿರುಗಣೆ ಮಡು’ ಪ್ರಮುಖ ಆಕರ್ಷಣೆ.

Advertisement

-ಪ್ರವೀಣ ಕೊಣನೂರು

Advertisement

Udayavani is now on Telegram. Click here to join our channel and stay updated with the latest news.

Next