Advertisement

ಮಂಡಳವು ನೊಂದ ಜೀವಗಳಿಗೆ ಆಶಾಕಿರಣ: ಶರಣಪ್ಪ ಫುಲಾರಿ

02:16 PM Jun 07, 2021 | Team Udayavani |

ಸೊಲ್ಲಾಪುರ: ಅಕ್ಕಲ್‌ಕೋಟೆ ತಾಲೂಕಿನ ಸುಮಾರು ಐವತ್ತು ಗ್ರಾಮಗಳಲ್ಲಿರುವ ದಿವ್ಯಾಂಗ, ವಂಚಿತ ಕಲಾವಿದರು, ಆಟ ಗಾರರ ಹಾಗೂ ಕಡು ಬಡವರಿಗೆ ದಿನಸಿ ಕಿಟ್‌ ವಿತರಿಸುವ ಮೂಲಕ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವು ನೊಂದ ಜೀವಗಳಿಗೆ ಆಶಾ ಕಿರಣವಾಗಿದೆ ಎಂದು ಶರಣಪ್ಪ ಫುಲಾರಿ ಹೇಳಿದರು.

Advertisement

ಅಕ್ಕಲ್‌ಕೋಟೆ ಪಟ್ಟಣದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ ಮತ್ತು ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸ್ಲೆ ಇವರ ನೇತೃತ್ವದಲ್ಲಿ ತೋಳನೂರ ಗ್ರಾಮದಲ್ಲಿ ಹಮ್ಮಿಕೊಂಡ ದಿನಸಿ ಕಿಟ್‌ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತು ಕೊರೊನಾದಿಂದ ನರಳಾಡುತ್ತಿರುವಾಗ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವು ಸಮಾಜದಲ್ಲಿಯ ನೊಂದ ಜೀವಗಳಿಗೆ ಆಶಾ ಕಿರಣವಾಗಿ ನಿಲ್ಲುವ ಮೂಲಕ ಅಕ್ಕಲ್‌ಕೋಟೆ ತಾಲೂಕಿನ ಸುಮಾರು 50 ಗ್ರಾಮಗಳಲ್ಲಿರುವ ಕಡು ಬಡವರಿಗೆ ದಿನ ನಿತ್ಯದ ಜೀವನಾವಶ್ಯಕ ವಸ್ತುಗಳನ್ನು ವಿತರಣೆ ಮಾಡಿರುವದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದರು.

ಪ್ರಕಾಶ ಸುರವಸೆ ಅವರು ಮಾತನಾಡಿ, ಕೊರೊನಾ ಹಿನ್ನಲೆ ಸಂಪೂರ್ಣ ದೇಶ ಸ್ಥಬ್ಧವಾಗಿದ್ದು, ತುತ್ತು ಅನ್ನಕ್ಕಾಗಿ ಬಡಿದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವು ತೊಂದರೆಗೆ ಒಳಗಾಗಿರುವ ಸಾವಿರಾರು ಜನರಿಗೆ ದಿನಸಿ ಕಿಟ್‌ ನೀಡುವ ಮೂಲಕ ಪ್ರಾಮಾಣಿಕವಾಗಿ ಜನಸೇವೆಯಲ್ಲಿ ಮಗ್ನರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅನ್ನಛತ್ರ ಮಂಡಳಿಯ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ ಮೋರೆ, ಎನ್‌ಸಿಪಿ ಅಧ್ಯಕ್ಷ ಮನೋಜ ನಿಕಮ್‌, ಪ್ರವೀಣ್‌ ಘಾಡಗೆ, ಯೋಗೇಶ ಪವಾರ, ಸುಭಾಷ ಭೋಸಲೆ, ರಮೇಶ ಕೇತ್‌, ವೈಭವ ನವಲೆ, ಬಾಳಾಸಾಹೇಬ ಪೋಳ, ಗೋಟು ಮಾನೆ, ನೀಖೀಲ ಪಾಟೀಲ ಮತ್ತು ಸಿದ್ಧಪ್ಪ ರಬ್ಟಾ, ಚಿದಾನಂದ ಮುಗಳಿಮಠ, ಸೋಮನಾಥ ಸಂಭಾಳ, ದಸ್ತಗೀರ್‌ ನದಾಫ್‌, ಕಾಶಿನಾಥ ತಳವಾರ, ಶ್ರೀಶೈಲಾ ರಬ್ಟಾ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next