Advertisement

ಮಗನ ಏಳ್ಗೆಗಾಗಿ ಅನಿತಾರಿಂದ ಒಂದೂಕಾಲು ರೂ. ಹರಕೆ

01:16 AM Feb 27, 2019 | Team Udayavani |

ಮದ್ದೂರು: ತಮ್ಮ ಪುತ್ರ ನಿಖೀಲ್‌ಕುಮಾರಸ್ವಾಮಿಯವರಿಗೆ ರಾಜಕೀಯ ದಲ್ಲಿ ಉತ್ತಮ ಭವಿಷ್ಯ ಸಿಗಲೆಂದು ಪ್ರಾರ್ಥಿಸಿ ರಾಮನಗರ ಶಾಸಕಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರ ಸ್ವಾಮಿಯವರು ಮಂಡ್ಯ ಜಿಲ್ಲೆ ಮದ್ದೂರಿನ ಶ್ರೀಹೊಳೆ ಆಂಜನೇಯಸ್ವಾಮಿ ದೇವರ ದರ್ಶನ ಪಡೆದು, ಒಂದೂಕಾಲು ರೂ.ಹರಕೆ ಹೊತ್ತರು. ಇಲ್ಲಿನ ಇತಿಹಾಸ ಪ್ರಸಿದಟಛಿ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಈ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಬಳಿಕ ಒಂದೂಕಾಲು ರೂ.ಹರಕೆ ಹೊತ್ತು, ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದ ಭಕ್ತರಿಗೆ ಕಾರ್ಯಸಿದ್ಧಿ  ಸಿಗುವ ಪ್ರತೀತಿ ಹಿನ್ನೆಲೆಯಲ್ಲಿ ಅನಿತಾ ಅವರು ಹರಕೆ ಹೊತ್ತಿದ್ದಾರೆ ಎನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖೀಲ್‌ ಕುಮಾರಸ್ವಾಮಿಯವರನ್ನು ಸ್ಪರ್ಧೆಗಿಳಿಸಲು
ನಡೆದಿರುವ ತೆರೆಮರೆಯ ಸಿದಟಛಿತೆ ನಡುವೆ ಈ ಭೇಟಿ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next