Advertisement

ಅಗಲಿದ ಕೇಂದ್ರ ಪರಿಸರ ಸಚಿವ ಅನಿಲ ಮಾಧವ ದವೆ ಅಂತ್ಯಸಂಸ್ಕಾರ

11:42 AM May 19, 2017 | Team Udayavani |

ಭೋಪಾಲ್‌ : ಹೃದಯ ಸ್ತಂಭನಕ್ಕೆ ಗುರಿಯಾಗಿ ಅರ್ವತ್ತರ ಹರೆಯದಲ್ಲೇ ಅಗಲಿದ ಕೇಂದ್ರ ಪರಿಸರ ಸಚಿವ ಅನಿಲ ಮಾಧವ ದವೆ ಅವರ ಅಂತ್ಯಕ್ರಿಯೆ ಇಂದು ಶುಕ್ರವಾರ ಬೆಳಗ್ಗೆ ಮದ್ಯಪ್ರದೇಶದ ಹೋಶಂಗಾಬಾದ್‌ ಜಿಲ್ಲೆಯಲ್ಲಿನ ನರ್ಮದಾ ನದೀ ದಂಡನೆಯ ಮೇಲೆ ನಡೆಯಿತು.

Advertisement

ಅವಿವಾಹಿತರಾಗಿದ್ದ ದವೆ ಅವರ ಚಿತೆಗೆ ಅವರ ಸಹೋದರ ಮತ್ತು ಸೋದರ ಸಂಬಂದಿ ಅಗ್ನಿ ಸ್ಪರ್ಶಗೈದು ದುಃಖಾಶ್ರುಗಳೊಂದಿಗೆ ಅಂತಿಮ ವಿದಾಯ ಕೋರಿದರು. 

ಕೇಂದ್ರ ಸಚಿವೆ ಉಮಾ ಭಾರತಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥವಾರ್‌ ಚಾಂದ್‌ ಗೆಹಲೋತ್‌, ಬಿಜೆಪಿ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ ಮೊದಲಾದವರು ದವೆ ಅವರ ಅಂತ್ಯಕ್ರಿಯೆಯಲ್ಲಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next