Advertisement

ಅನಿಲ್‌ ಲಾಡ್‌ ಶೀಘ್ರ ಬಿಜೆಪಿ ಸೇರ್ಪಡೆ: ಜನಾರ್ದನ ರೆಡ್ಡಿ

06:30 AM Feb 10, 2018 | |

ಗಂಗಾವತಿ: ನನ್ನ ಕುಟುಂಬದ ಸದಸ್ಯರಾಗಿ ಹಲವು ರಾಜಕೀಯ ಸ್ಥಾನಮಾನ ಪಡೆದ ಆನಂದ ಸಿಂಗ್‌ ಉಂಡ ಮನೆಗೆ ದ್ರೋಹ ಬಗೆದಿದ್ದಾರೆ. ಬಳ್ಳಾರಿ ಶಾಸಕ ಅನಿಲ್‌ ಲಾಡ್‌ ಸೇರಿ ಉತ್ತರ ಕರ್ನಾಟಕದ ಕೆಲವು ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿದ್ದು, ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್‌ ಸಿಂಗ್‌ ಹಾಗೂ ನಾಗೇಂದ್ರ ಸೇರಿ ಹಲವರನ್ನು ಕಾಂಗ್ರೆಸ್‌ ಬ್ಲ್ಯಾಕ್‌ವೆುàಲ್‌ ತಂತ್ರ ನಡೆಸಿ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಂಪ್ಲಿ ಶಾಸಕ ಸುರೇಶ ಬಾಬು ಅವರನ್ನು ಸಹ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಕಾಂಗ್ರೆಸ್‌ ಸೇರುವಂತೆ ಮಾಡಲು ಯತ್ನಿಸಲಾಗಿದೆ. ಸುರೇಶ ಬಾಬು ಬಿಜೆಪಿ ಶಿಸ್ತಿನ ಸಿಪಾಯಿ. ಅವರು ಎಂದಿಗೂ ಪಕ್ಷ ದ್ರೋಹದ ಕೆಲಸ ಮಾಡುವುದಿಲ್ಲ . ಮಾಜಿ ಸಂಸದರಾದ ಫಕೀರಪ್ಪ ಮತ್ತು ಶಾಂತಮ್ಮ ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು ಇದನ್ನು ಪಕ್ಷದ ಹೈಕಮಾಂಡ್‌ ಗಮನಕ್ಕೆ ತರಲಾಗುತ್ತದೆ ಎಂದರು.

ಮತ್ತೂಮ್ಮೆ ಪರಣ್ಣ ಶಾಸಕರಾಗಲಿ: ಮಾಜಿ ಶಾಸಕ ಪರಣ್ಣ ಮುನವಳ್ಳಿ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಾರ್ದನ ರೆಡ್ಡಿ ಅವರು, ವೇದಿಕೆ ಮೇಲೆ ಮಾತನಾಡಿ, ಇಷ್ಟೊಂದು ಜನರು ನೆರೆದಿರುವುದನ್ನು ಕಂಡರೆ 2008ರಂತೆ ಪರಣ್ಣ ಮುನವಳ್ಳಿ ಮತ್ತೂಮ್ಮೆ ಶಾಸಕರಾಗಲಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಟಿಕೆಟ್‌ ಪರಣ್ಣ ಮುನವಳ್ಳಿಯವರಿಗೆ ಎಂದು ಹೇಳಿದರು. ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಸಿಳ್ಳೆ, ಚಪ್ಪಾಳೆ ಮೂಲಕ ರೆಡ್ಡಿ ಹೇಳಿಕೆಯನ್ನು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next