Advertisement

ಅನಿಲ್ ದೇಶ್ ಮುಖ್ ಗೆ 14 ದಿನಗಳ ನ್ಯಾಯಾಂಗ ಬಂಧನ

06:46 PM Nov 15, 2021 | Team Udayavani |

ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಗೆ ಪಿಎಂಎಲ್‌ಎ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Advertisement

ಇದಕ್ಕೂ ಮೊದಲು ಇಡಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಅನಿಲ್ ದೇಶ್ ಮುಖ್ ಅವರನ್ನು ಕಸ್ಟಡಿಗೆ ಒಪ್ಪಿಸಿತ್ತು. ಆ ವೇಳೆ ಅನಿಲ್ ದೇಶ್ ಮುಖ್ ಆರ್ಥರ್‌ ರೋಡ್‌ ಜೈಲಿನಲ್ಲಿ ಒಂದು ರಾತ್ರಿ ಕಳೆಯಬೇಕಾಯಿತು. ಅಕ್ರಮ ಹಣ ವರ್ಗಾವಣೆ ಮಾತ್ರವಲ್ಲದೆ, ಸಚಿನ್‌ ವಾಝೆ ಮೂಲಕ ವಾರಕ್ಕೆ 100 ಕೋಟಿ ರೂ. ವಸೂಲಿ ಮಾಡಿದ ಆರೋಪವೂ ಅನಿಲ್ ದೇಶ್ ಮುಖ್ ಮೇಲಿದೆ.

ಸೋಮವಾರ ಇಡಿ ಕಸ್ಟಡಿ ಅಂತ್ಯಗೊಂಡ ನಂತರ, ಎನ್‌ಸಿಪಿ ನಾಯಕನನ್ನು ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ತನಿಖಾ ಸಂಸ್ಥೆಯು ಯಾವುದೇ ಹೆಚ್ಚಿನ ಬಂಧನವನ್ನು ಕೋರದ ಕಾರಣ ನ್ಯಾಯಾಲಯವು ದೇಶ್ ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಇದನ್ನೂ ಓದಿ:ಭೂ ಚಕ್ರದ ಗೆಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು?

ದೇಶ್ ಮುಖ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನಂತರ, ಅವರ ವಯಸ್ಸು ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಗಣಿಸಿ ಮನೆಯ ಆಹಾರ ಮತ್ತು ಔಷಧಿಗಳನ್ನು ಹೊಂದಲು ಅವಕಾಶ ನೀಡಬೇಕೆಂದು ಅವರ ನ್ಯಾಯವಾದಿ ತಂಡವು ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದೆ. ಅವರಿಗೆ ಹಾಸಿಗೆ ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಬಹುದು ಎಂದು ಅದು ಹೇಳಿದೆ. ಆದರೆ, ನ್ಯಾಯಾಲಯವು ಅವರ ಮನೆ ಆಹಾರದ ಅರ್ಜಿಯನ್ನು ಬಾಕಿ ಇರಿಸಿದೆ.

Advertisement

ಕೆಲವು ದಿನಗಳ ನಂತರ ಆಹಾರದ ಬಗ್ಗೆ ಯಾವುದೇ ದೂರು ಬಂದರೆ ಅವರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು  ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next