Advertisement

ಕರಾವಳಿಯಾದ್ಯಂತ ಅಂಗಾರಕ ಸಂಕಷ್ಟಿ ಆಚರಣೆ

12:49 AM Sep 18, 2019 | mahesh |

ಮಂಗಳೂರು/ಉಡುಪಿ: ಕರಾವಳಿಯ ಗಣಪತಿ ಹಾಗೂ ಇತರ ಪ್ರಮುಖ ದೇವಾಲಯಗಳಲ್ಲಿ ಅಂಗಾರಕ ಸಂಕಷ್ಟಿ ಮಂಗಳವಾರ ನಡೆಯಿತು. ಸಾವಿರಾರು ಮಂದಿ ಸಂಕಷ್ಟಿ ಉಪವಾಸ ಕುಳಿತು ದೇವರ ದರ್ಶನ ಪಡೆದು ಕೃತಾರ್ಥರಾದರು.

Advertisement

ಶರವು ಮಹಾಗಣಪತಿ ದೇವಸ್ಥಾನಕ್ಕೆ ಬೆಳಗ್ಗಿನಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ದೇವರಿಗೆ ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಪತಿ ಹವನ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಇಡೀ ದಿನ 10 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಧ್ಯಾಹ್ನ ವೇಳೆ 12.30ಕ್ಕೆ ಪ್ರಸಾದ ವಿತರಣೆ ಆರಂಭವಾಗಿದ್ದು, 2.30ರ ತನಕ ಸರತಿ ಸಾಲು ಮುಂದುವರಿದಿತ್ತು.

ಶರವು ದೇವಳದ ದೇಗುಲದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮತ್ತು ಸುದೇಶ್‌ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 11.30ರಿಂದ ಮಹಾಗಣಪತಿ ಯಾಗ ಪೂರ್ಣಾಹುತಿ, 12ಕ್ಕೆ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆಯಿತು. ಈ ಸಂದರ್ಭ ಎಸ್‌. ರಾಹುಲ್‌ ಶಾಸ್ತ್ರಿ, ವಿಠಲ್‌ ಭಟ್‌, ಗಣೇಶ್‌ ಭಟ್‌, ಶಶೀಂದ್ರ ಭಟ್‌ ಉಪಸ್ಥಿತರಿದ್ದರು.

ಅಂಗಾರಕ ಸಂಕಷ್ಟಿ ಸಂಭ್ರಮದ ಅಂಗವಾಗಿ ಶರವು ಕ್ಷೇತ್ರದ ಇಡೀ ದೇಗುಲವನ್ನು ಭಕ್ತರು ಒಟ್ಟು ಸೇರಿ 18ಬಗೆಯ 5 ಲಕ್ಷ ಹೂವುಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು.

ಆನೆಗುಡ್ಡೆಯಲ್ಲೂ ಭಕ್ತರ ಗಡಣ
ಕುಂದಾಪುರ ಸಮೀಪದ ಆನೆಗುಡ್ಡೆ ದೇವಸ್ಥಾನಕ್ಕೆ ಸುಮಾರು 20,000 ಭಕ್ತರು ಭೇಟಿ ನೀಡಿದರು. ಸುಮಾರು 4,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು. ಅರ್ಚಕ ಚಂದ್ರಕಾಂತ ಉಪಾಧ್ಯಾಯ ಮತ್ತು ಸಹೋದರರು, ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಹಸ್ರನಾಳಿಕೇರ ಗಣಪತಿ ಯಾಗ ನಡೆಯಿತು. ಸುಮಾರು 8,000 ಪಂಚಗಜ್ಜಾಯ ಪ್ಯಾಕೇಟ್‌ಗಳನ್ನು ಭಕ್ತರು ಕೊಂಡುಕೊಂಡರು.

Advertisement

ಮಂಗಳೂರಿನ ಮಣ್ಣಗುಡ್ಡೆ ಹರಿದಾಸ ಲೇನ್‌ನಲ್ಲಿರುವ ನವದುರ್ಗಾ ಮಹಾಗಣಪತಿ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಕದ್ರಿ ಮಂಜುನಾಥ ದೇವಸ್ಥಾನ, ಉರ್ವ ಮಹಾಗಣಪತಿ, ಕುದ್ರೋಳಿ ಗೋಕರ್ಣನಾಥ, ಗಣೇಶಪುರ ಮಹಾಗಣಪತಿ, ಮರೋಳಿ ಸೂರ್ಯನಾರಾಯಣ, ಬೋಳೂರು ಮಾರಿಯಮ್ಮ ದೇವಸ್ಥಾನ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಹಟ್ಟಿಯಂಗಡಿ, ಉದ್ಯಾವರ, ಪಡುಬಿದ್ರಿ, ಉಪ್ಪೂರು, ಬಾರಕೂರು ಬಟ್ಟೆ ವಿನಾಯಕ ಸಹಿತ ವಿವಿಧ ಗಣಪತಿ ದೇವಸ್ಥಾನಗಳಲ್ಲಿ ಅಂಗಾರಕ ಸಂಕಷ್ಟಿ ವ್ರತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next