ಆನೇಕಲ್: ಮಕ್ಕಳ ಕಳ್ಳರ ವದಂತಿ ವ್ಯಾಪಕವಾಗಿರುವ ವೇಳೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ನಾಲ್ವರು ಬಾಲಕರು ಶನಿವಾರ ಸಂಜೆ ನಾಪತ್ತೆಯಾಗಿ ಪೋಷಕರು ತೀವ್ರ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ತಾಲೂಕಿನ ಮಂಚನಹಳ್ಳಿ ಗ್ರಾಮದ ಚಂದನ್ (12), ಕಾಸ್(15), ಕಾರ್ತಿಕ್(15), ನಂದನ್ (12) ನಾಪತ್ತೆಯಾದ ಬಾಲಕರು.ಇವರೆಲ್ಲರೂ ಎಲ್ಲರೂ ಒಂದೇ ಶಾಲೆಯಲ್ಲಿ ಓದುತ್ತಿದ್ದು ಶನಿವಾರ ಸಂಜೆ ಒಟ್ಟಿಗೆ ಆಟವಾಡುತ್ತಿದ್ದರು.
ನಾಲ್ವರು ಮನೆಯವರಿಗೆ ಹೇಳದೆ ಹೊಸೂರು ಬೆಟ್ಟಕ್ಕೆ ತೆರಳಿದ್ದಾರೆ ಅಲ್ಲಿ ಇದ್ದೆಲ್ಲಾ ಹಣ ಖಾಲಿ ಮಾಡಿ ಮನೆಗೆ ಬಾರಲು ಪರದಾಡಿದ್ದಾರೆ. ಹೊಸೂರು ಬಸ್ ನಿಲ್ದಾಣದಲ್ಲಿ ದಿಕ್ಕು ತೋಚದೆ ಕುಳಿತಿದ್ದ ನಾಲ್ವರು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಪೊಲೀಸರು ಮನೆಗೆ ಕರೆ ತಂದು ಪೋಷಕರ ಆತಂಕ ದೂರ ಮಾಡಿದ್ದಾರೆ.
ಮಕ್ಕಳಾದ ದಿಂದ ಕಂಗಾಲಾದ ಪೋಷಕರು ಮಕ್ಕಳು ಮನೆಗೆ ಬರುತ್ತಿದ್ದಂತೆ ತೀವ್ರ ತರಾಟಗೆ ತೆಗೆದುಕೊಂಡಿದ್ದಾರೆ.
ಸಂಜೆ 6 ಗಂಟೆಯಾದರೂ ಬಾಲಕರು ಮನೆಗೆ ಬಾರದಿದ್ದರಿಂದ ಆತಂಕಕೊಂಡ ಪೋಷಕರು, ಅತ್ತಿಬೆಲೆ ಠಾಣೆಯಲ್ಲಿ ಬಾಲಕರು ನಾಪತ್ತೆಯಾಗಿರುವ ಬಗ್ಗೆ ದೂರು
ನೀಡಿದ್ದರು.
ಚಂದನ್ ಮಂಚನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್ರ ಪುತ್ರನಾಗಿದ್ದಾನೆ. ಉಳಿದವರೂ ಆರ್ಥಿಕವಾಗಿ ಸ್ಥಿತಿವಂತರ ಮಕ್ಕಳಾಗಿದ್ದಾರೆಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕರ ಪತ್ತೆಗೆ 4 ತಂಡಗಳನ್ನು ರಚಿಸಿ ತೀವ್ರ ಶೋಧಕ್ಕಿಳಿದಿದ್ದರು.