Advertisement

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

06:24 PM May 04, 2024 | Team Udayavani |

ತಿರುನಲ್ವೇಲಿ (ತಮಿಳುನಾಡು) : ಕಾಂಗ್ರೆಸ್ ತಿರುನಲ್ವೇಲಿ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಕೆಪಿಕೆ ಜಯಕುಮಾರ್ ಧನಸಿಂಗ್ (60) ಅವರ ಅರ್ಧ ಸುಟ್ಟ ಮೃತದೇಹ ಶನಿವಾರ ತಿರುನಲ್ವೇಲಿಯಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ತನಗೆ ಜೀವ ಬೆದರಿಕೆಯ ಬಗ್ಗೆ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ.

Advertisement

ಧನಸಿಂಗ್ ಅವರು ಕಾಂಗ್ರೆಸ್‌ನ ತಿರುನಲ್ವೇಲಿ (ಪೂರ್ವ) ಮುಖ್ಯಸ್ಥರಾಗಿದ್ದರು. ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹತ್ಯೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಖಂಡ ಜಯಕುಮಾರ್ ಮೃತದೇಹ ಪತ್ತೆಯಾಗಿರುವುದು ಆಘಾತಕಾರಿ ಎಂದಿದ್ದಾರೆ.

ಏಪ್ರಿಲ್ 30 ರಂದು ಶ್ರೀ ಜಯಕುಮಾರ್ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಅದರಲ್ಲೂ ನಂಗುನೇರಿ ಕಾಂಗ್ರೆಸ್ ಶಾಸಕ ರೂಬಿ ಮನೋಕರನ್ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ತಂಗಬಾಲು ಅವರ ಹೆಸರನ್ನು ದೂರು ಪತ್ರದಲ್ಲಿ ಉಲ್ಲೇಖಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next