Advertisement

ವಸತಿ ಶಾಲೆಯಲ್ಲಿ ಸಾಂಬಾರ್‌ ಪಾತ್ರೆಗೆ ಬಿದ್ದು ಬಾಲಕ ಸಾವು

09:45 AM Nov 16, 2019 | Team Udayavani |

ಕರ್ನೂಲ್‌: ವಸತಿ ಶಾಲೆಯ ಸಾಂಬಾರ್‌ ಪಾತ್ರೆಗೆ ಬಿದ್ದು, 6 ವರ್ಷ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಇಲ್ಲಿನ ಖಾಸಗಿ ವಸತಿ ಶಾಲೆಯೊಂದರಲ್ಲಿ ನಡೆದಿದೆ.

Advertisement

ಸಾಂಬಾರ್‌ ಪಾತ್ರೆಗೆ ಬಾಲಕ ಬಿದ್ದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರವಾದ ಸುಟ್ಟಗಾಯಗಳಾಗಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸಂಚಾಲಕ ನಾಗ ಮಲ್ಲೇಶ್ವರ ರೆಡ್ಡಿ, ಆಡಳಿತ ನಿರ್ದೇಶಕ ವಿಜಯ್‌ ಕುಮಾರ್‌ ರೆಡ್ಡಿ ಎಂಬವರನ್ನು ಬಂಧಿಸಲಾಗಿದೆ.

ಘಟನೆ ವಿವರ
ಮಧ್ಯಾಹ್ನ ಊಟದ ಹೊತ್ತಿಗೆ ಮಕ್ಕಳು ತಾಮುಂದು ತಾಮುಂದು ಎಂದು ಓಡುವುದು ಸಾಮಾನ್ಯ. ಯುಕೆಜಿ ವಿದ್ಯಾರ್ಥಿ ಬಾಲಕ ಪುರುಷೋತ್ತಮ ಕೂಡ ಊಟದ ಹಾಲ್‌ಗೆ ಓಡಿದ್ದ. ಅಲ್ಲಿ ದೊಡ್ಡ ಸಾಂಬಾರ್‌ ಪಾತ್ರೆ ನೆಲದಲ್ಲಿ ಇಡಲಾಗಿದ್ದು ಆಯ ತಪ್ಪಿ ಅದಕ್ಕೆ ಬಿದ್ದಿದ್ದಾನೆ. ಈ ವೇಳೆ ಊಟದ ಹಾಲಿನಲ್ಲಿ ಯಾರೂ ನಿರ್ವಾಹರು ಇಲ್ಲದ್ದರಿಂದ ಪುರುಷೋತ್ತಮನ ಜೀವಕ್ಕೆ ಕುತ್ತು ತಂದಿದೆ. ಬಾಲಕ ಬಿದ್ದ ಕೂಡಲೇ ಮಕ್ಕಳು ಬೊಬ್ಬೆ ಹಾಕಿದ್ದು, ಬಳಿಕ ಬಂದ ಶಾಲೆಯ ಮಂದಿ ಆತನನ್ನು ಪಾತ್ರೆಯಿಂದ ಹೊರತೆಗೆದಿದ್ದಾರೆ. ಆಸ್ಪತ್ರೆಗೆ ಸಾಗಿಸಿದರೂ ಬಳಿಕ ಪ್ರಯೋಜನವಾಗಲಿಲ್ಲ. ಶಾಲೆಯಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ತೀವ್ರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಸ್ಥಳೀಯರು, ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಹೆತ್ತವರು ದೂರು ನೀಡಿದ್ದರಿಂದ ಶಾಲೆಯ ಆಡಳಿತ ಮಂಡಳಿ ಪ್ರಮುಖರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next