Advertisement

Andhra Pradesh: ಭಾರೀ ಮಳೆ, ಅವಘಡಕ್ಕೆ ಸಿಲುಕಿ 7 ಮಂದಿ ಸಾವು

12:47 AM Sep 01, 2024 | Team Udayavani |

ಅಮರಾವತಿ: ಆಂಧ್ರಪ್ರದೇಶದ ಹಲವು ಭಾಗದಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ವಿಜಯವಾ­ಡದ ಮೊಗಲ್‌ರಾಜಪುರಂನಲ್ಲಿ ಭೂ ಕುಸಿತ ಉಂಟಾಗಿ, ಬೃಹತ್‌ ಬಂಡೆಗಳು ಮನೆಗಳ ಮೇಲೆ ಉರುಳಿದ ಪರಿಣಾಮ 4 ಮಂದಿ ಮೃತಪಟ್ಟಿದ್ದಾರೆ.

Advertisement

ಮೃತರ ಕುಟುಂಬಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇತ್ತ ಗುಂಟೂರು ಜಿಲ್ಲೆ­ಯಲ್ಲಿ ಓರ್ವ ಶಿಕ್ಷಕ ಮತ್ತು ಇಬ್ಬರು ವಿದ್ಯಾರ್ಥಿಗಳಿದ್ದ ಕಾರು ಹೊಳೆ ದಾಟುವಾಗ ಕೊಚ್ಚಿ ಹೋಗಿದ್ದು, ಮೂವರು ನದಿ ಪಾಲಾಗಿರುವ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next