Advertisement

ಆಂಧ್ರದ ಹಿರಿಯ ನಾಗರಿಕರಿಗೆ 3,000 ರೂ. ಮಾಸಿಕ ಪಿಂಚಣಿ: CM ಜಗನ್‌ ಘೋಷಣೆ

11:04 AM Jun 01, 2019 | Sathish malya |

ವಿಜಯವಾಡ : ವಿಭಜಿತ ಆಂಧ್ರ ಪ್ರದೇಶದ ಎರಡನೇ ಮುಖ್ಯಮಂತ್ರಿಯಾಗಿ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಇಂದು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ತತ್‌ಕ್ಷಣವೇ ರಾಜ್ಯದ ಹಿರಿಯ ನಾಗರಿಕರಿಗೆ ತಿಂಗಳಿಗೆ 3,000 ರೂ. ಪಿಂಚಣಿಯನ್ನು ಘೋಷಿಸಿದರು.

Advertisement

ರಾಜ್ಯ ಹಿರಿಯ ನಾಗರಿಕರಿಗಾಗಿರುವ ಈ ಪಿಂಚಣಿ ಯೋಜನೆಯ ಆರಂಭದಲ್ಲಿ ತಿಂಗಳಿಗೆ 2,250 ರೂ. ನೀಡಲಾಗುವುದು, ಮೂರು ವರ್ಷದೊಳಗೆ ಅದನ್ನು 3,000 ರೂ.ಗಳಿಗೆ ಏರಿಸಲಾಗುವುದು ಎಂದು ಸಿಎಂ ಜಗನ್‌ ಮೋಹನ್‌ ರೆಡ್ಡಿ ಹೇಳಿದರು.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ತಾನು ಮೊತ್ತ ಮೊದಲು ಸಹಿ ಹಾಕುವ ಯೋಜನೆಯೇ ರಾಜ್ಯದ ಹಿರಿಯ ನಾಗರಿಕ ಪಿಂಚಣಿ ಯೋಜನೆಯಾಗಿರುತ್ತದೆ ಎಂದವರು ಪ್ರಕಟಿಸಿದರು.

ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರು ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು.

ಇಂದಿರಾ ಗಾಂಧಿ ಮುನಿಸಿಪಾಲಿಟಿ ಸ್ಟೇಡಿಯಂ ನಲ್ಲಿ ಇಂದು ಗುರುವಾರ ನಡೆದ ಈ ಕಾಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜಗನ್‌ ಅವರ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

Advertisement

ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್‌ ಮತ್ತು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್‌ ಗಣ್ಯ ಅತಿಥಿಗಳಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next