Advertisement

ನಿಮ್ಮ ಮಕ್ಕಳು ಓದಿದ್ದು ಯಾವ ಮಾಧ್ಯಮದಲ್ಲಿ?

10:59 AM Nov 14, 2019 | Team Udayavani |

ಅಮರಾವತಿ: ಆರನೇ ತರಗತಿವರೆಗೆ ಆಂಧ್ರಪ್ರದೇಶದಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಪ್ರಸ್ತಾಪಕ್ಕೆ ವಿರೋಧ ಮಾಡಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ನಾಯಕ ಪವನ್‌ ಕಲ್ಯಾಣ್‌ ವಿರುದ್ಧ ಸಿಎಂ ಜಗನ್ಮೋಹನ ರೆಡ್ಡಿ ಲೇವಡಿ ಮಾಡಿದ್ದಾರೆ.

Advertisement

ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಿದ್ದೀರಿ? ನಿಮ್ಮ ಮೊಮ್ಮಕ್ಕಳು ನಾಳೆ ಯಾವ ಮಾಧ್ಯಮದಲ್ಲಿ ಓದಲಿದ್ದಾರೆ ಎಂದು ಕೇಳಿದ್ದಾರೆ. ಪವನ್‌ ಕಲ್ಯಾಣ್‌ ಅವರೇ ನಿಮಗೆ 3-4 ಹೆಂಡತಿಯರಿದ್ದಾರೆ, 4-5 ಮಕ್ಕಳಿದ್ದಾರೆ ಅವರೆಲ್ಲಾ ಯಾವ ಮಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಆಂಧ್ರ ಸರಕಾರ 6ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಎಂದು ನಿರ್ಧಾರ ಕೈಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next