Advertisement

ಆಂಧ್ರಪ್ರದೇಶಕ್ಕೆ 3 ರಾಜಧಾನಿ : ಮಸೂದೆ‌ ಮಂಡನೆ

10:12 AM Jan 22, 2020 | Team Udayavani |

ಅಮರಾವತಿ: ಆಂಧ್ರಪ್ರದೇಶಕ್ಕೆ 3 ರಾಜಧಾನಿಗಳನ್ನು ಹೊಂದುವುದಕ್ಕಾಗಿ ಇರುವ ಮಸೂದೆಯನ್ನು ಬರೋಬ್ಬರಿ ಎಂಟು ಗಂಟೆಗಳ ಪ್ರತಿಭಟನೆಗಳ ಬಳಿಕ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

Advertisement

ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ನೇತೃತ್ವದ ಸರಕಾರ ನಿರ್ಧಾರದ ವಿರುದ್ಧ ತೆಲುಗು ದೇಶಂ ಪಕ್ಷದ ಶಾಸಕರು, ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಸಂಸದ ಜಯದೇವ್‌ ಗಲ್ಲಾ ಅವರನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ರಾಜ್ಯ ವಿವಿಧ ಭಾಗಗಳಲ್ಲಿ ರಾಜಧಾನಿ ವಿಭಜನೆ ಮಸೂದೆ ಖಂಡಿಸಿ ದಾಂಧಲೆಗಳು ನಡೆದಿವೆ. ವಿಶೇಷವಾಗಿ ಅಮರಾವತಿಯಲ್ಲಿ ರೈತರು, ಮಹಿಳೆಯರು ಮತ್ತು ಇತರರು ಧರಣಿ ನಡೆಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ವಿಧಾನಸೌಧದತ್ತ ನುಗ್ಗಲು ಯತ್ನಿಸಿದಾಗ ಅವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next