Advertisement

ಮಳೆ ತಂದ ದುರಂತ: ಆಂಧ್ರ ಸಚಿವನ ಪುತ್ರ, ಸ್ನೇಹಿತ ಅಪಘಾತದಲ್ಲಿ ಸಾವು

11:24 AM May 10, 2017 | udayavani editorial |

ಹೈದರಾಬಾದ್‌ : ಆಂಧ್ರ ಪ್ರದೇಶದ ಹಿರಿಯ ಸಚಿವ ಪಿ ನಾರಾಯಣ ಅವರ ಪುತ್ರ ನಿಶಿತ್‌ ಹಾಗೂ ಆತನ ಸ್ನೇಹಿತ ಇಂದು ಬುಧವಾರ ನಸುಕಿನ ವೇಳೆ ಭಾರೀ ಮಳೆಯಿಂದಾಗಿ ಉಂಟಾದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಆಂಧ್ರ ಪ್ರದೇಶದ ಸ್ಥಳೀಯಾಡಳಿತೆ ಸಚಿವ ಪಿ ನಾರಾಯಣ ಅವರ 22ರ ಹರೆಯದ ಪುತ್ರ ಪಿ ನಿಶಿತ್‌ ಅವರು ಖುದ್ದಾಗಿ ಮರ್ಸಿಡಿಸ್‌ ಬೆಂಜ್‌ ಕಾರನ್ನು ಡ್ರೈವ್‌ ಮಾಡುತ್ತಿದ್ದರು. ಭಾರೀ ಮಳೆಯಿಂದಾಗಿ ರಸ್ತೆ ಹೊಂಡದಲ್ಲಿ ನೀರು ತುಂಬಿಕೊಂಡಿತ್ತಲ್ಲದೆ ರಸ್ತೆ ತುಂಬ ನೀರು ನಿಂತಿತ್ತು.

ನಸುಕಿನ 3 ಗಂಟೆಯ ವೇಳೆಗೆ ನಿಶಿತ್‌ ಅವರು ಈ ರಸ್ತೆಯಲ್ಲಿ ತಮ್ಮ ಕಾರನ್ನು ಡ್ರೈವ್‌ ಮಾಡುವಾಗ ನೀರು ತುಂಬಿದ ಹೊಂಡವನ್ನು ತಪ್ಪಿಸಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ  ಮೆಟ್ರೋ ರೈಲಿನ ಸ್ತಂಭಕ್ಕೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಅಪಘಾತ ನಡೆದ ವೇಳೆ ಈ ಇಡಿಯ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ರಸ್ತೆಯ ಬಹುಭಾಗ ನೀರಿನಿಂದ ತುಂಬಿತ್ತು. 

ನಿಶಿತ್‌ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರ ವರದಿ ಸಂಜೆಯ ವೇಳೆಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಜುಬಿಲಿ ಹಿಲ್ಸ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್‌ ವೆಂಕಟ್‌ ರೆಡ್ಡಿ ಅವರು ತಿಳಿಸಿರುವ ಪ್ರಕಾರ ಅಪಘಾತದ ಪರಿಣಾಮವಾಗಿ ನಿಶಿತ್‌ ಹಾಗೂ ಅವರ ಸ್ನೇಹಿತ ರಾಜಾ ರವಿ ವರ್ಮಾ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಒಡನೆಯೇ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ಗಾಯಾಳುಗಳಿಬ್ಬರೂ ಆಸ್ಪತ್ರೆಗೆ ಕರೆತರಲ್ಪಡುತ್ತಲೇ ಮೃತಪಟ್ಟಿದ್ದರು ಎಂದು ಪ್ರಕಟಿಸಿದರು. 

ನಿಶಿತ್‌ ಅವರ ತಂದೆ ನಾರಾಯಣ ಅವರು ಲಂಡನ್‌ ಗೆ ಹೋಗಿದ್ದು ಇದೀಗ ಅಲ್ಲಿಂದ ಮರಳಿ ಧಾವಿಸಿ ಬರಲಿದ್ದಾರೆ. ನಿಶಿತ್‌ ಅವರು ನಾರಾಯಣ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕರಾಗಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next