Advertisement

“ಇಳಿಬೇಕು ಬಾಗಿಲು ತೆಗೆಯಿರಿ.. ಸೆಲ್ಫಿ ತೆಗೆಯಲು ಹೋಗಿ ಮುಂದಿನ ನಿಲ್ದಾಣದವರೆಗೆ ರೈಲಿನಲ್ಲೇ ಸಿಲುಕಿದ ವ್ಯಕ್ತಿ; ವಿಡಿಯೋ

01:18 PM Jan 18, 2023 | Team Udayavani |

ಆಂಧ್ರ ಪ್ರದೇಶ:‌ ವ್ಯಕ್ತಿಯೊಬ್ಬ ನಿಂತಿದ್ದ ರೈಲಿನ ಒಳಗೆ ಸೆಲ್ಫಿ ತೆಗೆಯಲು ಹೋಗಿ ಸಿಲುಕಿಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

Advertisement

ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್ ಗೆ ಪಯಣಿಸುವ ವಂದೇ ಭಾರತ್‌ ರೈಲು ನಿಂತಿದ್ದ ವೇಳೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆಯಲು ರೈಲಿನ ಒಳಗೆ ಹತ್ತಿದ್ದಾನೆ. ಒಂದೆರೆಡು ಫೋಟೋ ಕ್ಲಿಕ್ಕಿಸುತ್ತಿರುವಾಗಲೇ  ರೈಲಿನ ಡೋರ್‌ ಬಂದ್‌ ಆಗಿದೆ. ಹೊರಗೆ ಹೋಗಲು ಆಗದೇ ಕಕ್ಕಾಬಿಕ್ಕಿ ಆದ ವ್ಯಕ್ತಿ ಸಿಬ್ಬಂದಿ ಬಳಿ ಅಳಲು ತೋಡಿಕೊಂಡಿದ್ದಾನೆ.

ರಾಜಮಂಡ್ರಿ ರೈಲು ಹತ್ತಿದ ವ್ಯಕ್ತಿ ಏನು ಮಾಡಲಾಗದೇ ವಿಜಯವಾಡ ಸ್ಟೇಷನ್‌ ನಲ್ಲಿ ಇಳಿದು ಮತ್ತೆ ರಾಜಮಂಡ್ರಿಗೆ ವಾಪಸ್‌ ಆಗಿದ್ದಾರೆ. ಈ ವೇಳೆ ರೈಲಿನ ಪಯಣಕ್ಕೆ ಟಿಕೆಟ್‌ ಪಾವತಿಸಿ ವ್ಯಕ್ತಿ ಸಂಚರಿಸಿದ್ದಾರೆ.

ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜ.16 ಕ್ಕೆ ವರ್ಚುವಲ್‌ ನಲ್ಲಿ ಪ್ರಧಾನಿ ಮೋದಿ  ವಿಶಾಖಪಟ್ಟಣಂ -ಸಿಕಂದರಾಬಾದ್ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ಗೆ ಚಾಲನೆ ನೀಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next