Advertisement

ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ: ಶ್ರೀಮನ್ಮಹಾರಥೋತ್ಸವ ಸಂಪನ್ನ

06:23 AM Apr 08, 2017 | |

ಹೆಬ್ರಿ: ಕಾರ್ಕಳ ತಾಲೂಕಿನ ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಷ್ಟಬಂಧ ಸಹಿತ ಶ್ರೀ ದೇವರ ಪುನರ್‌ ಪ್ರತಿಷ್ಠೆ, ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ, ವಾರ್ಷಿಕ ಮಹೋತ್ಸವದ ಅಂಗವಾಗಿ ಎ.7ರಂದು ಶ್ರೀ ದೇವರ ಮನ್ಮಹಾರಥೋತ್ಸವ 
ವಿಜೃಂಭಣೆಯಿಂದ ಜರಗಿತು.

Advertisement

ಮಧ್ಯಾಹ್ನ ಶ್ರೀ ಮನ್ಮಹಾರಥಾ ರೋಹಣ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಬಳಿಕ ಗಿಲ್ಲಾಳಿ ಪದ್ಮನಾಭ ಆಚಾರ್ಯ ಅವರ ವತಿಯಿಂದ ನಡೆದ ಲಘು ಉಪಾಹಾರ ಸೇವೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ವೈಭವದ ರಥೋತ್ಸವ, ರಾತ್ರಿ ಭೂತಬಲಿ, ಶಯನೋಲಗ ನಡೆಯಿತು. 

ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ್‌, ಗೌರವ ಅಧ್ಯಕ್ಷರಾದ ಎಚ್‌. ದಯಾನಂದ ಬಲ್ಲಾಳ್‌, ರವೀಂದ್ರ
ಬಲ್ಲಾಳ್‌, ಪ್ರಸನ್ನ ಬಲ್ಲಾಳ್‌, ಆರ್ಥಿಕ ಸಮಿತಿ ಅಧ್ಯಕ್ಷ ಎಚ್‌. ಪ್ರಸಾದ್‌ ಬಲ್ಲಾಳ್‌, ಸಂಚಾಲಕ ಎಚ್‌. ಸತೀಶ್‌ ಪೈ, ಕ್ಷೇತ್ರೇಶರ ತಾರನಾಥ ಬಲ್ಲಾಳ್‌, ಆಡಳಿತಾಧಿಕಾರಿ ಗಣೇಶ್‌ ಪಿ., ಪ್ರಚಾರ ಹಾಗೂ ಸಂಪರ್ಕ ಸಮಿತಿ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ವ್ಯವಸ್ಥೆ ಮತ್ತು ಕಾಮಗಾರಿ ಸಮಿತಿ ಅಧ್ಯಕ್ಷ ಪ್ರವೀಣ್‌ ಬಲ್ಲಾಳ್‌, ಅರ್ಚಕ ರಾಮಕೃಷ್ಣ ಆಚಾರ್ಯ, ಪವಿತ್ರಪಾಣಿ ವಾದಿರಾಜ ಓಕುಡ, ಸಮಿತಿ ಉಪಾಧ್ಯಕ್ಷ ಜ್ಯೋತಿಷಿ ನಿತ್ಯಾನಂದ ನಾಯಕ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next