Advertisement
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಪಕ್ಷಾಂತರಿ ಆನಂದ ಅಸ್ನೋಟಿಕರ್ ಗೆ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಅಪಪ್ರಚಾರ ನಡೆಸಲು ವಿಷಯಗಳೇ ಸಿಗುತ್ತಿಲ್ಲ. ಹೀಗಾಗಿ ಅವರು ಅನಂತಕುಮಾರರನ್ನು ಬೈಯ್ಯುವುದು, ಶೂನ್ಯ ಸಂಪಾದನೆ ಎಂದು ಹೇಳುತ್ತ ತಿರುಗುತ್ತಿದ್ದಾರೆ. ಈಗಾಗಲೇ ಜನರಿಂದ ತಿರಸ್ಕೃತಗೊಂಡಿರುವ ಆನಂದ ಅಸ್ನೋಟಿಕರ್ ಈ ಬಾರಿ ಸೋಲಲಿದ್ದಾರೆ. ಅನಂತಕುಮಾರ ಹೆಗಡೆ ವಿರುದ್ಧ ಕೈಲಾಗದವ ಮೈ ಪರಚಿಕೊಂಡ ಎನ್ನುವಂತೆ, ಆನಂದ ಅಸ್ನೋಟಿಕರ್ ಹೋದಲೆಲ್ಲಾ ಬೊಬ್ಬಿಡುತ್ತಿದ್ದಾರೆ ಎಂದರು.
Related Articles
Advertisement
ಇಂತಹ ವ್ಯಕ್ತಿ ಎಂಪಿಯಾದರೆ, ಜನರ ಗತಿ ಅಧೋಗತಿ. ಆದ್ದರಿಂದ ಅನಂತಕುಮಾರ ಹೆಗಡೆ ಅಭಿವೃದ್ಧಿ ಮಾಡಿಲ್ಲ ಎಂದು ಅಪಪ್ರಚಾರ ನಡೆಸುವ ನೈತಿಕತೆಯನ್ನು ಆನಂದ ಅಸ್ನೋಟಿಕರ್ ಕಳೆದುಕೊಂಡಿದ್ದಾರೆ ಎಂದರು.
ಹೆಚ್ಚು ಬಹುಮತದ ಆಯ್ಕೆನಿಶ್ಚಿತ: ಅನಂತ್ ವಿಶ್ವಾಸಶಿರಸಿ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಆಯ್ಕೆಗೊಳ್ಳುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು.
ಅವರು ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಮೂರರಲ್ಲಿ ಎರಡರಷ್ಟು ಅಂಶ ಸ್ಥಾನ ಪಡೆದು ಗೆಲ್ಲಲಿದೆ. ಅಧಿ ಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಅಸ್ಮಿತೆಯ ಆಧಾರವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ, ದೇಶಕ್ಕೆ ಹೊಸ ದಿಕ್ಕು ಕೊಡುವ ಚುನಾವಣೆ ಇದಾಗಲಿದೆ ಎಂದೂ ಹೇಳಿದರು. ಏ.2ರ ಬೆಳಗ್ಗೆ 11ಕ್ಕೆ ಕಾರವಾರದಲ್ಲಿ ನಾಮಪತ್ರ ಸಲ್ಲಿಸುತ್ತಿರುವದಾಗಿ ಹೇಳಿದ ಅನಂತಕುಮಾರ ಹಿರಿಯರ ಸಹಕಾರದಲ್ಲಿ ಅವರ ಆಸೆಯಿಂದ ಅಭ್ಯರ್ಥಿಯಾಗಿದ್ದೇನೆ ಎಂದರು. ಎಷ್ಟು ಜನ ಸೇರತಾರೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರಳವಾಗಿ ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ಜನ ಸೇರಿಸುವುದಿಲ್ಲ, ಅವರಾಗೆ ಬಂದರೆ ಗೊತ್ತಿಲ್ಲ ಎಂದೂ ಹೇಳಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ಗಣಪತಿ ನಾಯ್ಕ, ನಂದನ್ ಸಾಗರ್, ರಮೇಶ ಆಚಾರಿ, ರವಿ ಚಂದಾವರ, ರೂಪಾ ಹೆಗಡೆ, ರೇಖಾ ಹೆಗಡೆ ಇತರರಿದ್ದರು. ಮಾರಿಕಾಂಬೆ-ಮಧುಕೇಶ್ವರನಿಗೆ ಪೂಜ
ಶಿರಸಿ: ಆದಿ ಕವಿ ಪಂಪ ಹಾಡಿ ಹೊಗಳಿದ, ಬನವಾಸಿಯ ಪುರಾಣ ಪ್ರಸಿದ್ಧ ಮಧುಕೇಶ್ವರ, ಶಿರಸಿಯ ಮಾರಿಕಾಂಬೆ, ದೊಡ್ನಳ್ಳಿಯ ಕುಲ ದೇವರಲ್ಲಿಯೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪೂಜೆ ಸಲ್ಲಿಸಿದರು. ಸೋಮವಾರ ಪತ್ನಿ ರೂಪಾ ಹಾಗೂ ಕುಟುಂಬದ ಸದಸ್ಯರ ಜೊತೆ ತೆರಳಿದ ಅವರು ಪ್ರಥಮ ಪೂಜೆಯನ್ನು ಬನವಾಸಿಯ ಮಧುಕೇಶ್ವರನಿಗೆ ಸಲ್ಲಿಸಿದರು. ಬಳಿಕ ಗುಡ್ನಾಪುರದ ಬಂಗಾರಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ರಾಜ್ಯದ ಶಕ್ತಿ ದೇವತೆ, ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸೀರೆ, ಹಣ್ಣುಕಾಯಿ ಅರ್ಪಿಸಿದ ಅನಂತಕುಮಾರ ಹೆಗಡೆ ಅವರು ಪಕ್ಕದಲ್ಲೇ ಇರುವ ಭೂತರಾಜ ದೇವರಿಗೂ ಪೂಜೆ ಸಲ್ಲಿಸಿದರು. ಬಳಿಕ ಕುಲ ದೇವರಾದ ದೊಡ್ನಳ್ಳಿಯ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು.