Advertisement

ಅನಂತ್‌ ಹೆಗಡೆಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ: ಅಣ್ಣಾ ಹಜಾರೆ 

03:42 PM Jan 05, 2018 | Team Udayavani |

ಬೆಳಗಾವಿ: ‘ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಮಾನಸಿಕ ಚಿಕಿತ್ಸೆ ಕೊಡಿಸುವ ಅಗತ್ಯವಿದೆ’ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಕಿಡಿ ಕಾರಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ ಸಂವಿಧಾನ ಬದಲಾವಣೆ ಮಾಡಲೆಂದೆ ನಾವು ಬಂದಿರುವುದು ಎಂದ ಅನಂತ್‌ ಕುಮಾರ್‌ ವಿರುದ್ಧ ಆಕ್ರೋಶ ಹೊರ ಹಾಕಿದರು. 

‘ಏನು ತಿಳಿದಿದ್ದಾರೆ, ದೇಶದ ಎಲ್ಲಾ ಸರ್ಕಾರಗಳು ಸಂವಿಧಾನದ ಮೇಲೆ ನಡೆಯುತ್ತದೆ. ಇಂತಹ  ಹೇಳಿಕೆ ನೀಡುವುದು ಸರಿಯಲ್ಲ’ ಎಂದರು. 

ಅಣ್ಣಾ ಹಜಾರೆ ಅವರು ಕಳೆದ ಕೆಲ ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಮುಂದಿನ ಲೋಕಾಪಾಲ್‌ ಮಸೂದೆ ಕುರಿತಾಗಿನ ಹೋರಾಟಕ್ಕೆ ಸಜ್ಜಾವಾಗುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next