Advertisement

ಪಶ್ಚಿಮವಾಹಿನಿಯಲ್ಲಿ ಅನಂತ್‌ ಅಸ್ಥಿ ವಿಸರ್ಜನೆ

06:05 AM Nov 15, 2018 | Team Udayavani |

ಶ್ರೀರಂಗಪಟ್ಟಣ: ಸೋಮವಾರ ಮೃತಪಟ್ಟ ದಿ.ಅನಂತಕುಮಾರ್‌ ಅವರ ಚಿತಾಭಸ್ಮವನ್ನು ಕಾವೇರಿ ನದಿ ತೀರದ ಪಶ್ಚಿಮ ವಾಹಿನಿಯಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು.

Advertisement

ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಟುಂಬಸ್ಥರು ಹಾಗೂ ಬಿಜೆಪಿ ನಾಯಕರೊಂದಿಗೆ ಪಶ್ಚಿಮವಾಹಿನಿಗೆ ಆಗಮಿಸಿದ ಅನಂತ್‌ಕುಮಾರ್‌ ಸಹೋದರ ನಂದಕುಮಾರ್‌, ಅಸ್ಥಿ ವಿಸರ್ಜನೆ ಕಾರ್ಯ ನಡೆಸಿದರು. ಜ್ಯೋತಿಷಿ ಭಾನುಪ್ರಕಾಶ್‌ ನೇತೃತ್ವದ ವೈದಿಕರ ತಂಡ ಧಾರ್ಮಿಕ ವಿಧಿ-ವಿಧಾನ ಪೂರೈಸಿತು.

ಸಂಸದ ಪ್ರಹ್ಲಾದ್‌ ಜೋಶಿ, ಶಾಸಕ ರಾಮದಾಸ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ನಾಗೇಂದ್ರ ಹಾಗೂ ಸ್ಥಳೀಯ ಬಿಜೆಪಿ
ಮುಖಂಡರು ಹಾಜರಿದ್ದರು. ಇದಕ್ಕೂ ಮೊದಲು ಬೆಂಗಳೂರಿನಿಂದ ಶ್ರೀರಂಗಪಟ್ಟಣದವರೆಗೆ ಕಾರಿನಲ್ಲಿ ಚಿತಾಭಸ್ಮ ತರಲಾಯಿತು. ದಾರಿಯುದ್ದಕ್ಕೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next