Advertisement

ದಿನೇಶ್‌-ಅನಂತ್‌ ಟ್ವೀಟ್ ವಾರ್‌

12:30 AM Jan 29, 2019 | |

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟ್ವೀಟ್ ಸಮರ ಸೋಮವಾರವೂ ಮುಂದುವರಿದಿದೆ. ‘ಕೇಂದ್ರ ಸಚಿವರಾಗಿ ನಿಮ್ಮ ಕೊಡುಗೆ ಏನು’ ಎಂದು ದಿನೇಶ್‌ ಗುಂಡೂರಾವ್‌ ಪ್ರಶ್ನೆಗೆ ಅನಂತ್‌ಕುಮಾರ್‌ ಹೆಗ್ಡೆ ವೈಯಕ್ತಿಕ ಟೀಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

Advertisement

ಕೇಂದ್ರ ಸಚಿವ ಹಾಗೂ ಸಂಸದರಾಗಿ ಅನಂತಕುಮಾರ್‌ ಹೆಗಡೆ ಅವರ ಕೊಡುಗೆ ಏನು? ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಈ ರೀತಿಯ ವ್ಯಕ್ತಿಗಳೆಲ್ಲಾ ಸಚಿವರು-ಸಂಸದರಾಗುವುದು ಒಪ್ಪಿಕೊಳ್ಳಲಾಗದು.
– ದಿನೇಶ್‌ಗುಂಡೂರಾವ್‌

ದಿನೇಶ್‌ ಗುಂಡೂರಾವ್‌ ಎತ್ತಿರುವ ಪ್ರಶ್ನೆಗಳಿಗೆ ನಾನು ಖಂಡಿತ ಉತ್ತರ ನೀಡುತ್ತೇನೆ. ಅದಕ್ಕೂ ಮೊದಲು ಅವರು ಯಾರೊಂದಿಗೆ ಸೇರಿ ಸಾಧನೆ ಮಾಡಿದ್ದಾರೆ ಎಂಬುದನ್ನು ದಯವಿಟ್ಟು ತಿಳಿಸಲಿ. ನನಗೆ ತಿಳಿದ ಮಟ್ಟಿಗೆ ಈ ವ್ಯಕ್ತಿ ಒಬ್ಬ ಮುಸ್ಲಿಂ ಮಹಿಳೆ ಹಿಂದೆ ಓಡಿಹೋಗಿದ್ದು ಮಾತ್ರ ನನಗೆ ಗೊತ್ತು.
– ಅನಂತ್‌ಕುಮಾರ್‌ ಹೆಗಡೆ

ಅನಂತಕುಮಾರ್‌ ಹೆಗಡೆ ಪ್ರತಿಯೊಬ್ಬ ಭಾರತೀಯರಿಗೂ ಮುಜುಗರ ಉಂಟು ಮಾಡುವ ವ್ಯಕ್ತಿ. ಅವರು ಕೇಂದ್ರ ಸಚಿವರಾಗಿರಲು ಯೋಗ್ಯರಲ್ಲ. ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು.
– ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ.

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ನನ್ನ ಕುಟುಂಬದ ಬಗ್ಗೆ ಅಗೌರವ ತೋರಿ ಮಾತನಾಡಿರುವುದು ದುರದೃಷ್ಟಕರ. ಟ್ವೀಟ್‌ನಲ್ಲಿ ಅವರನ್ನು ಟ್ಯಾಗ್‌ ಮಾಡಲು ನನಗೆ ಆಗುತ್ತಿಲ್ಲ. ಏಕೆಂದರೆ ಅವರು ನನ್ನನ್ನು ಬ್ಲಾಕ್‌ ಮಾಡಿದ್ದಾರೆ.
–  ಟಬು ರಾವ್‌, ದಿನೇಶ್‌ ಗುಂಡೂರಾವ್‌ ಪತ್ನಿ.

Advertisement

ಅನಂತ ಕುಮಾರ್‌ ಹೆಗಡೆ ಅವರು ಗ್ರಾಪಂ ಸದಸ್ಯನಾಗಲೂ ನಾಲಾಯಕ್‌.
– ಎಂ.ಬಿ.ಪಾಟೀಲ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next