Advertisement

Anandapura: ವರುಣಾರ್ಭಟ: ಕೊಚ್ಚಿ ಹೋದ ಸೇತುವೆ: ಸಂಪರ್ಕ ಕಳೆದುಕೊಂಡ ಗ್ರಾಮಸ್ಥರು

05:55 PM Oct 09, 2024 | Team Udayavani |

ಆನಂದಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಆನಂದಪುರ ಸಮೀಪದ ಯಡೇ ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೇರುಬೀಸ್ ಗ್ರಾಮದಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿ ಗ್ರಾಮದ ಸಂಪರ್ಕ ಕಳೆದುಕೊಂಡಿದೆ.

Advertisement

ಗೇರುಬೀಸ್ ಹೊಳೆಯಲ್ಲಿ ಸೇತುವೆ ಸಂಪೂರ್ಣ ಮುಳುಗಿದ್ದು, ಕರಡಿಮನೆ ಗ್ರಾಮದ ಸೇತುವೆ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಕರಡಿಮನೆ, ಗೇರ್ ಬೀಸ್ ತೊಳಿಕಲ್ಲು ಗ್ರಾಮದಲ್ಲಿನ  ಕುಟುಂಬಗಳು  ರಸ್ತೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಶುಂಠಿ, ಭತ್ತ, ಮೆಕ್ಕೆಜೋಳ ಸೇರಿದಂತೆ ರೈತರ ಅನೇಕ ಬೆಳೆಗಳು ಮಳೆಯಿಂದ ಹಾನಿ ಸಂಭವಿಸಿದೆ.

ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಾನಂದ್, ರಾಮು, ಸ್ಥಳೀಯರಾದ ನೇತ್ರ, ನಾಗೇಂದ್ರ ತಿಮ್ಮಮ್ಮ, ಸುಮಾ, ಪ್ರತಿಕ್ಷ  ಇಂದಿರಾ, ಮಳೆಯಿಂದಾದ ಹಾನಿಯ ಬಗ್ಗೆ ಮಾತನಾಡಿ, ಮಳೆಗಾಲದಲ್ಲಿ ಪ್ರತಿ ವರ್ಷವೂ ಸೇತುವೆ ಮುಳುಗುವುದು ಕೊಚ್ಚಿ ಹೋಗುವುದು ಸಾಮಾನ್ಯ. ಇದರಿಂದ ಈ ಭಾಗದ ಜನರಿಗೆ ಸಮಸ್ಯೆ ಉಂಟಾಗುತ್ತಿದ್ದು, ಈ ಸೇತುವೆಯನ್ನು ಎತ್ತರ ಮಾಡಿಸುವಂತೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next