Advertisement

Anandapura: ಮದುವೆಯಾಗುತ್ತೇನೆ ಎಂದು ನಂಬಿಸಿ ಕೊಲೆಗೈದು ದೇಹವನ್ನು ಹೂತಿಟ್ಟ ಪ್ರಿಯಕರ…

07:37 PM Jul 24, 2024 | Team Udayavani |

ಆನಂದಪುರ: ಜೀವನದಲ್ಲಿ ಸುಂದರವಾಗಿ ಬದುಕಬೇಕು ಎಂದು ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಕೊಲೆಗೈದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Advertisement

ಹತ್ಯೆಯಾದ ಯುವತಿಯನ್ನು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದ ಸೌಮ್ಯ ಎನ್ನಲಾಗಿದೆ.

ಏನಿದು ಪ್ರಕರಣ :
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದ ಸೌಮ್ಯಳನ್ನು ಕೊಪ್ಪದ ಭರತ್ ಫೈನಾನ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಾಳಗುಪ್ಪ ಮೂಲದ ಸೃಜನ್ ಸೌಮ್ಯಳನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಹೇಳಿದ್ದು,  ತಾನು ಪ್ರೀತಿಸಿದ ಸೌಮ್ಯ ದಲಿತ ಜನಾಂಗಕ್ಕೆ ಸೇರಿದವಳು ಎಂದು ತಿಳಿದು ನಿರಾಕರಿಸಿದ.

ಈ ವಿಚಾರವಾಗಿ ಕಳೆದ ಒಂದು ವರ್ಷದ ಹಿಂದೆ ಸೌಮ್ಯ ಆತ್ಮಹತ್ಯೆಗೆ ಯತ್ನಿಸಿದಳು. ಈ ವಿಷಯ ಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಸೃಜನ್ ಅನ್ನು ಕರೆಸಿ ಸೌಮ್ಯಳ ಪ್ರೀತಿಯ ಬಗ್ಗೆ ವಿಚಾರಿಸಿದಾಗ ಇನ್ನು ಆರು ತಿಂಗಳು ಬಿಟ್ಟು ಮದುವೆಯಾಗುತ್ತೇನೆಂದು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾನೆಂದು ಸೌಮ್ಯಳ ಅಕ್ಕ ಸುಮಾ ತಿಳಿಸಿದ್ದಾಳೆ.

ಸೌಮ್ಯ ನರ್ಸಿಂಗ್ ಕಲಿಯುತ್ತಿದ್ದಳು ಜುಲೈ 2ರಂದು ಈಕೆ ಕಾಣೆಯಾಗಿದ್ದಾಳೆ, ಇತ್ತ ಮನೆಯವರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುಮಾನಗೊಂಡ ಪೊಲೀಸರು ಸೃಜನನ್ನು ವಿಚಾರಣೆ ನಡೆಸಿದಾಗ ಸಾಗರ ದಿಂದ ಆಕೆಯನ್ನು ಬಸ್ಸಿನಲ್ಲಿ ಕಳಿಸಿರುವುದಾಗಿ ಸೃಜನ್ ತಿಳಿಸಿದ್ದ ಎಂದು ಕೊಲೆಯಾದ ಸೌಮ್ಯಳ ಅಕ್ಕ ಸುಮಾ ಹೇಳಿದ್ದಾಳೆ.

Advertisement

ಆದರೆ ಯುವತಿಯ ಮೊಬೈಲ್ ರಿಪ್ಪನ್ ಪೇಟೆಯ ಸಮೀಪ ಹೆದ್ದಾರಿಪುರದಲ್ಲಿ ಲೊಕೇಶನ್ ಪತ್ತೆಯಾಗಿದ್ದು. ಸೃಜನ್ ಸೌಮ್ಯಳನ್ನು ಅಲ್ಲಿ ಕೊಲೆ ಮಾಡಿ. ದೇಹವನ್ನು ಆನಂದಪುರ ಸಮೀಪದ ಮುಂಬಾಳು ರೈಲ್ವೆ ಗೇಟ್ ನ ಪಕ್ಕದಲ್ಲಿ ಮದ್ಲೆಸರ ಗ್ರಾಮದ ರಸ್ತೆಯ ಪಕ್ಕದಲ್ಲಿ ನೀರಿನ ಪೈಪ್ ಅಳವಡಿಕೆಗೆ ತೆಗೆದಿರುವ ಗುಂಡಿಯಲ್ಲಿ ಹೂತು ಹಾಕಿರುವುದಾಗಿ ತಿಳಿದು ಬಂದಿದೆ.

ಸೌಮ್ಯ ಕುಟುಂಬದವರು ಕೊಲೆ ಮಾಡಿದ ಕಟುಕನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನೊಂದ ಕುಟುಂಬದವರು ಆನಂದಪುರಕ್ಕೆ ಬಂದಿದ್ದು ಸಂಜೆಯಾದರೂ ಕೊಲೆ ಮಾಡಿ ಹೂತಿರುವ ಯುವತಿಯ ಶವವನ್ನು ಮಾತ್ರ ತೆಗೆದಿರಲಿಲ್ಲ.

ಇದನ್ನೂ ಓದಿ: Vitla: ಅಂಗನವಾಡಿಗೆ ಕನ್ನ… ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು

Advertisement

Udayavani is now on Telegram. Click here to join our channel and stay updated with the latest news.

Next