Advertisement

ಆನಂದ್‌ಸಿಂಗ್‌ ಪ್ರಕರಣ ತಲೆತಗ್ಗಿಸುವ ವಿಚಾರ

07:22 AM Jan 24, 2019 | Team Udayavani |

ಮೈಸೂರು: ಆನಂದ ಸಿಂಗ್‌ ಪ್ರಕರಣದಿಂದ ಪಕ್ಷಕ್ಕೆ ಮುಜುಗರವಾಗಿರುವುದು ನಿಜ. ರಾಜಕೀಯ ವ್ಯವಸ್ಥೆಗೆ ಶೋಭೆ ತರಲ್ಲ. ಸಾರ್ವಜನಿಕ ಜೀವನದಲ್ಲಿರುವವರು ತಲೆತಗ್ಗಿಸುವ ವಿಚಾರ ಇದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಆನಂದ್‌ ಸಿಂಗ್‌ಗೆ ಆಗಿರುವ ತೊಂದರೆ ನಮಗೆ ನೋವುಂಟು ಮಾಡಿದೆ. ಆ ಬಗ್ಗೆ ವಿಷಾದವಿದೆ. ಈ ಪ್ರಕಣದಿಂದ ಪಕ್ಷಕ್ಕೂ ಮುಜುಗರವಾಗಿದೆ. ಇದಕ್ಕಾಗಿಯೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ರಚನೆ ಮಾಡಿರುವುದಲ್ಲದೆ, ಪ್ರಕರಣಕ್ಕೆ ಕಾರಣರಾದ ಶಾಸಕರನ್ನು ಅಮಾನತು ಮಾಡುವ ಕಠಿಣ ಕ್ರಮವನ್ನೂ ಪಕ್ಷ ತೆಗೆದುಕೊಂಡಿದೆ. ಸಮಿತಿಯ ವರದಿ ಬಂದ ನಂತರ ಪಕ್ಷ ಮುಂದಿನ ಕ್ರಮ ಕೈಗೊಳ್ಳಲಿದೆ.

ಜೊತೆಗೆ ಪೊಲೀಸರೂ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು. ವೈಯಕ್ತಿಕ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎಂಬ ಮಾಹಿತಿ ಇದೆ. ಸಮಿತಿಯ ವರದಿ ಬಂದ ಮೇಲೆ ನಿರ್ದಿಷ್ಟ ಕಾರಣ ಗೊತ್ತಾಗಲಿದ್ದು, ಮುಂದೆ ಈ ರೀತಿಯಾಗದಂತೆ ಎಚ್ಚರಿಕೆವಹಿಸಿಬೇಕಿದೆ ಎಂದು ಹೇಳಿದರು.

ಪ್ರಯತ್ನ ನಿಲ್ಲಿಸಲ್ಲ: 2008ರಲ್ಲಿ ಬಿಜೆಪಿಯವರಿಗೆ ಕರ್ನಾಟಕದಲ್ಲಿ ಅಧಿಕಾರ ಸಿಕ್ಕ ದಿನದಿಂದಲೂ ಆಪರೇಷನ್‌ ಕಮಲ ಮಾಡುತ್ತಾ, ವಾಮಮಾರ್ಗದಿಂದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆಪರೇಷನ್‌ ಕಮಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಗೋವಾ, ಈಶಾನ್ಯ ರಾಜ್ಯಗಳು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಮಾಡಿದ್ದಾರೆ.

ಆಪರೇಷನ್‌ ಕಮಲ ಬಿಜೆಪಿಯವರಿಗೆ ರಕ್ತದಲ್ಲಿ ಅಡಕವಾಗಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಆಪರೇಷನ್‌ ಕಮಲಕ್ಕೆ ಪ್ರಯತ್ನ ನಡೆಸಿ ವಿಫ‌ಲರಾಗುತ್ತಲೇ ಬಂದಿದ್ದಾರೆ. ಈಗಲೂ ಅವರೇನು ಪ್ರಯತ್ನ ನಿಲ್ಲಿಸಲ್ಲ. ನಾವು ಕೂಡ ಸರ್ಕಾರ ಉಳಿಸಿಕೊಳ್ಳಲು ಯಾವ ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next