Advertisement

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿ ಆನಂದ ಬೈಲೂರು ಆಯ್ಕೆ

04:32 PM Jul 10, 2018 | |

ಮುಂಬಯಿ: ಯುಎಇಯ ಕನ್ನಡಿಗರ ಸಂಘಟನೆಗಳಲ್ಲಿ ಒಂದಾಗಿರುವ ಕರ್ನಾಟಕ ಸಂಘ ಶಾರ್ಜಾ ಕಳೆದ ಹದಿನೈದು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ನಡೆಸಿಕೊಂಡು ನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನು ಮರುಭೂಮಿಯಲ್ಲಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತವಾಗಿದೆ. ಪ್ರಸ್ತುತ 2018-2019ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಜನಪ್ರಿಯ ಸಂಘಟಕ ಸ್ಥಳೀಯ ಬಿಲ್ಲವರ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿರುವ, ಸಂಘದ ಸ್ಥಾಪಕ ಸದಸ್ಯರು ಆಗಿರುವ ಆನಂದ ಬೈಲೂರು ಸರ್ವಾನುಮತದಿಂದ ಆಯ್ಕೆಯಾಗಿ¨ªಾರೆ.

Advertisement

ಉಪಾಧ್ಯಕ್ಷರಾಗಿ ಎಂ. ಇ. ಮೂಳೂರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನೋವೆಲ್‌ ಡಿ’ಅಲ್ಮೆಡಾ ಆಯ್ಕೆಯಾಗಿ¨ªಾರೆ. ಸಹ ಕಾರ್ಯದರ್ಶಿ ವಿಶ್ವನಾಥ್‌ ಶೆಟ್ಟಿ, ಕೋಶಾಧಿಕಾರಿಯಾಗಿ  ಶಶಿಕಾಂತ್‌ ಕಾನಂಗಿ,  ಸಾಂಸ್ಕೃತಿಕ ಕಾರ್ಯದರ್ಶಿಯಾಗಿ  ರಾಜೇಶ್‌ ಕುತ್ತಾರು, ಕ್ರೀಡಾ ಕಾರ್ಯದರ್ಶಿಯಾಗಿ  ಜೀವನ್‌ ಕುಕ್ಯಾನ್‌,  ಸಹ ಕ್ರೀಡಾಕಾರ್ಯದರ್ಶಿಯಾಗಿ  ಸಂದೀಪ್‌ ರಾವ್‌ ಅವರು ಆಯ್ಕೆಯಾಗಿ¨ªಾರೆ.

ಪೋಷಕರಾದ ಮಾರ್ಕ್‌ ಡೆನಿಸ್‌ ಡಿ’ಸೋಜಾ ಅವರು ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಲಹೆಗಾರರು ಪ್ರವೀಣ್‌ ಕುಮಾರ್‌ ಶೆಟ್ಟಿ, ಹರೀಶ್‌ ಶೇರಿಗಾರ್‌, ಬಿ. ಕೆ. ಗಣೇಶ್‌ ರೈ, ಪ್ರಭಾಕರ ಅಂಬಲೆ¤ರೆ, ಸತೀಶ್‌ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಸುಗಂಧ ರಾಜ್‌ ಬೇಕಲ್‌ ಮತ್ತು ಅನಂತ್‌ ರಾಮನ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾಗಿದ್ದ ಬಸಂತ್‌ ಬೇಕಲ್‌ ಅವರಿಗೆ ಶದ್ಧಾಂಜಲಿಯನ್ನು ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next