Advertisement

Mangaluru: ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ಸಾವು

08:01 PM Aug 10, 2024 | Team Udayavani |

ಮಂಗಳೂರು: ಬಲ್ಲಾಳ್‌ಬಾಗ್‌ನ ಜಿಯೋ ಪೆಟ್ರೋಲ್‌ ಪಂಪ್‌ ಬಳಿ ಆ. 8ರಂದು ರಾತ್ರಿ ಬಸ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸುಮಾರು 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ.

Advertisement

ಆ. 8ರಂದು ರಾತ್ರಿ 8ರ ವೇಳೆಗೆ ಘಟನೆ ನಡೆದಿದ್ದು, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬಸ್‌ ಢಿಕ್ಕಿ ಹೊಡೆದಿದೆ. ತತ್‌ಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆ. 9ರಂದು ಮುಂಜಾನೆ ವೇಳೆಗೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಸ್‌ ಚಾಲಕನ ವಿರುದ್ಧ ಸಂಚಾರ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚತ ವ್ಯಕ್ತಿಯ ಚಹರೆ: 5.7 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ. ಹೊಟ್ಟೆಯ ಬಲ ಭಾಗದಲ್ಲಿ ಹಾಗೂ ಬಲ ಕಾಲಿನಲ್ಲಿ ಹಳೆಯ ಗಾಯದ ಗುರುತು ಇದೆ. ಬಲ ಕೈಯಲ್ಲಿ ಹನುಮಂತ ದೇವರ ಹಚ್ಚೆ ಇದೆ.  ಮೃತದೇಹವನ್ನು ಜಿಲ್ಲಾ ವೆನಾÉಕ್‌ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಂಬಂಧಿಕರು ಇದ್ದಲ್ಲಿ ಪಾಂಡೇಶ್ವರದ ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ

 

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next