Advertisement

ಹೈನುಗಾರರು ಬದುಕು ಕಟ್ಟಿಕೊಳ್ಳಲು ನೆರವಾದ ಸಂಸ್ಥೆ

10:00 AM Feb 16, 2020 | sudhir |

ಬಹಳ ವರ್ಷಗಳ ಹಿಂದೆಯೇ ಹೈನುಗಾರರನ್ನು ಒಟ್ಟಾಗಿಸಿ, ಅವರಿಗೊಂದು ದಾರಿದೀಪವಾದ ಕೀರ್ತಿ ಸಿದ್ದಾಪುರ ಹಾಲು ಉತ್ಪಾದಕರ ಸಂಘದ್ದು. ಅಂದು 70 ಲೀ. ಹಾಲು ಸಂಗ್ರಹಿಸುತ್ತಿದ್ದ ಸಂಘ ಇಂದು ಬೆಳೆದ ಪರಿ ನಿಜಕ್ಕೂ ಅದ್ಭುತ.

Advertisement

ಸಿದ್ದಾಪುರ: ಸ್ವಾವಲಂಬನೆ ಬದುಕಿನ ಉದ್ದೇಶದಿಂದ ಆರಂಭಗೊಂಡ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ ಸಮಾಜಮುಖೀ ಧೋರಣೆಯನ್ನು ಹೊಂದಿದ್ದು, ಹೈನುಗಾರರ ಪಾಲಿಗೆ ಆಶಾಕಿರಣವಾಗಿದೆ.
ಈ ಸಂಘಕ್ಕೆ 45 ವರ್ಷಗಳ ಇತಿಹಾಸವಿದ್ದು, ಜಿಲ್ಲೆಯ ಪ್ರಮುಖ ಸಂಘವಾಗಿಯೂ ಗುರುತಿಸಿಕೊಂಡಿದೆ.

1975ರಲ್ಲಿ ಸಿದ್ದಾಪುರ ಗ್ರಾ.ಪಂ.ನ ಮೂರು ಗ್ರಾಮಗಳ ವ್ಯಾಪ್ತಿಯ 40 ಸದಸ್ಯರನ್ನು ಒಟ್ಟು ಸೇರಿಸಿ ಸಂಘ ಸ್ಥಾಪನೆಯಾಯಿತು. ಆರಂಭದ ದಿನಗಳಲ್ಲಿ ಪೇಟೆಯಲ್ಲಿರುವ ವ್ಯಾಸರಾವ್‌ ಅವರ ಕಟ್ಟಡದಲ್ಲಿ ಸಂಘ ಪ್ರಾರಂಭಗೊಂಡಿತು.

ಹೈನುಗಾರರಿಗೆ ವರದಾನ
ಸಿದ್ದಾಪುರ, ಜನ್ಸಾಲೆ, ಹೆನ್ನಾಬೈಲು ವ್ಯಾಪ್ತಿಯ ಗ್ರಾಮಸ್ಥರು ಮನೆಯಲ್ಲಿರುವ ಅಲ್ಪ ಪ್ರಮಾಣದ ಹಾಲನ್ನು ಹೊಟೇಲುಗಳಿಗೆ ಕೊಟ್ಟು ಆದಾಯಗಳಿಸುತ್ತಿದ್ದರು. ಇದನ್ನು ಊರ ಮುತ್ಸದ್ದಿಗಳು ಗಮನಿಸಿ ಹೈನುಗಾರರಿಗೆ ನಿಶ್ಚಿತ ಆದಾಯ, ಬದುಕಿನ ಭದ್ರತೆಗಾಗಿ ಸಂಘ ನಿರ್ಮಾಣಕ್ಕೆ ಯೋಜಿಸಿದರು.

ಅತ್ಯುತ್ತಮ ವ್ಯವಹಾರದ ಮೂಲಕ ಸಂಘ ಬೆಳವಣಿಗೆ ಹೊಂದುತ್ತಿದ್ದಂತೆಯೇ 1984ರಲ್ಲಿ ಗ್ರಾ. ಪಂ.ನಿಂದ 15 ಸೆಂಟ್ಸ್‌ ಜಾಗ ಕಾದಿರಿಸಿಕೊಂಡು ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಸದ್ಯ ಕಟ್ಟಡದಲ್ಲಿ ನಾಲ್ಕು ಅಂಗಡಿ ಕೋಣೆಗಳಿದ್ದು ಇದರಿಂದಲೇ ಸಂಘಕ್ಕೆ ಲಕ್ಷ ರೂ.ವರೆಗೆ ಆದಾಯ ಬರುತ್ತಿದೆ.

Advertisement

ಶೀತಲೀಕರಣ ಘಟಕ
ಸಂಘ ತನ್ನ ಬಳಿ ಶೀತಲೀಕರಣ ಘಟಕವನ್ನೂ ಹೊಂದಿದ್ದು ಇರಿಗೆ, ಕಲ್ಸಂಕ, ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಕೆರೆಕಟ್ಟೆ, ಹಂಚಿಕಟ್ಟೆ ಹಾಗೂ ಸಿದ್ದಾಪುರ ಸೇರಿದಂತೆ 8 ಸಂಘಗಳಿಂದ ಹಾಲು ಬಂದು ಶೇಖರಣೆಗೊಳ್ಳುತ್ತದೆ. ಸಂಘದ ವ್ಯಾಪ್ತಿಯ 40 ಸಂಘಗಳಿಗೆ ಸಂಬಂಧಿಸಿದಂತೆ ಪಶು ವೈದ್ಯಕೀಯ ಶಿಬಿರ ಕಚೇರಿ ಹೊಂದಿದೆ. ಪ್ರತಿ ತಿಂಗಳಿಗೆ ಸರಾಸರಿ 250 ಕೃತಕ ಗರ್ಭಧಾರಣೆ ನಡೆಯುತ್ತಿದೆ.

1600 ಲೀ. ಹಾಲು ಸಂಗ್ರಹ
ಸಂಘ ಆರಂಭವಾದ ಕಾಲದಲ್ಲಿ ಕೆನರಾ ಮಿಲ್ಕ್ ಯೂನಿಯನ್‌ಗೆ ಹಾಲು ಸರಬರಾಜು ಮಾಡುತ್ತಿದ್ದು ಉತ್ತಮ ಬೆಳೆವಣಿಗೆ ಕಂಡಿತ್ತು. ಬಳಿಕ ಒಕ್ಕೂಟ ಸ್ಥಾಪನೆಯಾದ ಬಳಿಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದೆ. ಆರಂಭದ ದಿನಗಳಲ್ಲಿ ಸಂಘದಲ್ಲಿ ದಿನಕ್ಕೆ 70 ಲೀ. ಹಾಲು ಸಂಗ್ರಹವಾಗುತ್ತಿತ್ತು. ಈಗ 1600 ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ 433 ಸದಸ್ಯರನ್ನು ಹೊಂದಿದ್ದು, 260 ಸದಸ್ಯರು ಸಂಘಕ್ಕೆ ಹಾಲು ನೀಡುತ್ತಿದ್ದಾರೆ. ಆಜ್ರಿ ಮೂರುಕೈಯಲ್ಲಿ ತನ್ನ ಶಾಖೆಯನ್ನೂ ಹೊಂದಿದೆ.

ಪ್ರಸ್ತುತ 5 ಸಾವಿರ ಲೀ. ಸಾಮಥ್ಯದ ಬಿ.ಎಂ.ಸಿ ಕೇಂದ್ರ ಆರಂಭಿಸಿದೆ. ಮುಂದೆ 8 ಸಾವಿರ ಸಾಮಥ್ಯದ ಬಿ.ಎಂ.ಸಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರ ಬಗ್ಗೆ ಈಗಾಗಲೇ ಒಕ್ಕೂಟಕ್ಕೆ ಪ್ರಾಸ್ತವನೆ ಕೂಡ ಸಲ್ಲಿಸಲಾಗಿದೆ.
– ಡಿ. ಗೋಪಾಲಕೃಷ್ಣ ಕಾಮತ್‌ ಅಧ್ಯಕ್ಷರು, ಸಿದ್ದಾಪುರ ಹಾ.ಉ.ಸ.ಸಂಘ

Advertisement

Udayavani is now on Telegram. Click here to join our channel and stay updated with the latest news.

Next