Advertisement

ಡ್ಯಾಂಗೆ ಬಿದ್ದು ವೃದ್ಧೆ ಸಾವು

09:14 PM Mar 13, 2023 | Team Udayavani |

ಕಾರ್ಕಳ: ಗುಂಡ್ಯಡ್ಕ ಕೌಡೂರು ನಿವಾಸಿ ವೃದ್ಧೆ ಬಡ್ದು ಹಾಂಡ್ತಿ (73) ಅವರು ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

Advertisement

ವೃದ್ಧೆಗೆ ಸರಿಯಾಗಿ ಕಣ್ಣು ಕಾಣದೆ ಇದ್ದು, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಉಡುಪಿ ಖಾಸಗಿ ಆಸ್ಪತ್ರೆಯಿಂದ ಹೊರರೋಗಿಯಾಗಿ ಔಷಧ ಪಡೆಯುತ್ತಿದ್ದರು. ಅವರ ಶವ ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಸೇತುವೆ ಬಳಿ ಇರುವ ನೀರಿನ ಡ್ಯಾಂಗೆ ಆಕಸ್ಮಿಕವಾಗಿ ಬಿದ್ದು ಅವರು ಮೃತಪಟ್ಟಿರುವುದಾಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next