Advertisement
ಇತ್ತೀಚೆಗೆ ಬಹುತೇಕ ಕೃಷಿ ಬೆಳೆಗಳಲ್ಲಿ ಕೀಟರೋಗ ಬಾಧೆಯು ಹೆಚ್ಚಾಗಿ ಕಂಡುಬರುತ್ತಿದೆ. ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಹೆಚ್ಚಿನ ಕೃಷಿ ವಿಸ್ತೀರ್ಣದಲ್ಲಿ ಬೆಳೆದ ಕಡಲೆ ಬೆಳೆಯಲ್ಲಿ ಕೂಡ ಕೀಟರೋಗ ಬಾಧೆ ಕಂಡುಬಂದಿದೆ. ರೈತರು ನೇರವಾಗಿ ರಸಾಯನಿಕ ಔಷಧಿಗಳ ಸಿಂಪಡಣೆಗೆ ಹೋಗುವ ಮೊದಲು ಸಮಗ್ರ ಪೀಡೆ ನಿರ್ವಹಣೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಆತ್ಮಾ ಯೋಜನೆ ಅಡಿಯಲ್ಲಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಇವರ ಮಾರ್ಗದರ್ಶನದಲ್ಲಿ ವಿನೂತನ ಕ್ರಮಕ್ಕೆ ಮುಂದಾಗಿದೆ.
Related Articles
ಪರಿಸರ ಸ್ನೇಹಿಯಾದ ಕಡಿಮೆ ವೆಚ್ಚದ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಯಂತ್ರವನ್ನು ಅಳವಡಿಸುವ ಸಂದರ್ಭದಲ್ಲಿ ಲಕ್ಷ್ಮೀ ಏಜನ್ಸಿಯ ಕರಿಬಸಪ್ಪ ಎಂ.ಜಿ. ಅವರು ಮಾಹಿತಿ ನೀಡಿ, ಹಗಲಿನಲ್ಲಿ ಸೂರ್ಯ ಪ್ರಕಾಶದಿಂದ ಚಾರ್ಜ್ ಆಗುವ ಯಂತ್ರವು ರಾತ್ರಿಯಾಗುತ್ತಿದ್ದಂತೆ ಸ್ವಯಂ ಚಾಲಿತವಾಗಿ ಬಲ್ಬ್ ಉರಿದು 10 ಘಂಟೆಯಷ್ಟೊತ್ತಿಗೆ ನಿಲ್ಲುತ್ತದೆ. ವಿಶೇಷ ಬೆಳಕಿಗೆ ಆಕರ್ಷಣೆಗೊಂಡ ಹಾರಾಡುವ ಕೀಟಗಳು ಕೆಳಗಿನ ಬುಟ್ಟಿಯಲ್ಲಿನ ದ್ರಾವಣದಲ್ಲಿ ಬಿದ್ದು ನಾಶವಾಗುತ್ತವೆ. ಈ ಯಂತ್ರವನ್ನು ಬಹತೇಕ ಎಲ್ಲ ಬೆಳೆಗಳಲ್ಲಿ ಅಳವಡಿಸಬಹುದಾಗಿದ್ದು, ಹಾರುವ ಕೀಟಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ.
Advertisement