Advertisement

ಹಣಕಾಸು ತಂತ್ರಜ್ಞಾನದಿಂದ ವ್ಯವಸ್ಥೆಗೆ ಪೂರಕ ವಾತಾವರಣ: ಡಾ| ಎಸ್‌.ಟಿ.

05:51 PM Dec 26, 2023 | Team Udayavani |

ಹಾವೇರಿ: ಹಣಕಾಸು ತಂತ್ರಜ್ಞಾನ ಎನ್ನುವುದು ಹಣಕಾಸು ಸೇವೆಗಳನ್ನು ನೀಡಲು ತಂತ್ರಜ್ಞಾನವನ್ನು ಬಳಸುವ ಕಂಪನಿಗಳಿಂದ ಕೂಡಿದ ಉದ್ಯಮವಾಗಿದೆ. ವಿಮೆ, ಆಸ್ತಿ ನಿರ್ವಹಣೆ ಮತ್ತು ಪಾವತಿ ಮತ್ತು ಹಲವಾರು ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ವ್ಯವಸ್ಥೆಗೆ ಪೂರಕ ಮತ್ತು ಅನುಕೂಲಕರ ವಾತಾವರಣ ನಿರ್ಮಾಣ ಮಾಡಿದೆ ಎಂದು ಹಾವೇರಿ ವಿವಿ ಕುಲಸಚಿವ ಡಾ| ಎಸ್‌.ಟಿ. ಬಾಗಲಕೋಟಿ ಹೇಳಿದರು.

Advertisement

ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಆಯೋಜಿಸಿದ್ದ ಹಣಕಾಸು ತಂತ್ರಜ್ಞಾನ ತಾಂತ್ರಿಕ ಯುಗಕ್ಕಾಗಿ ಹಣಕಾಸು ಸೇವೆಗಳ ವಲಯವನ್ನು ಮರುಪರಿಶೀಲನೆ ವಿಷಯ ಕುರಿತ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ತಂತ್ರಜ್ಞಾನವು ಭಾರತದಲ್ಲಿ ತುಲನಾತ್ಮಕವಾಗಿ ಹೊಸ ಉದ್ಯಮವಾಗಿ ಹೊರಹೊಮ್ಮಿದೆ.
ಭಾರತೀಯ ಮಾರುಕಟ್ಟೆಯು ಫಿನ್‌ಟೆಕ್‌ ಅನ್ನು ಅಳವಡಿಸಿಕೊಳ್ಳುವ ವಿವಿಧ ವಲಯಗಳಲ್ಲಿ ಬೃಹತ್‌ ಹೂಡಿಕೆಗಳಿಗೆ ಸಾಕ್ಷಿಯಾಗಿದೆ. ಇದು ದೇಶವನ್ನು ಡಿಜಿಟಲ್‌ ಆರ್ಥಿಕತೆಯತ್ತ ತಳ್ಳುತ್ತಿರುವ ದೃಢವಾದ ಮತ್ತು ಪರಿಣಾಮಕಾರಿ ಸರ್ಕಾರದ ಸುಧಾರಣೆಗಳಿಂದ ಭಾಗಶಃ ನಡೆಸಲ್ಪಟ್ಟಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ವ್ಯವಸ್ಥೆ ಅತ್ಯಂತ ಮಹತ್ವದ ಮೈಲಿಗಲ್ಲುಗಳನ್ನು ದಾಟಿ ವಿಶ್ವವನ್ನು ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಹಣಕಾಸು ತಂತ್ರಜ್ಞಾನವೂ ಸಹ ತನ್ನ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡು ಎಲ್ಲಾ ಕ್ಷೇತ್ರಗಳಂತೆ ಮುಂದೆ ಸಾಗುತ್ತಿದೆ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಬೆಂಗಳೂರಿನ ಹಣಕಾಸು ತಂತ್ರಜ್ಞಾನಿ ಡಾ| ಕಿರಣಕುಮಾರ ಕೆ.ವಿ., ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಹಣಕಾಸು ಮಾಹಿತಿ ತಂತ್ರಜ್ಞ ಡಾ| ಸುಧೀಂದ್ರ ವಿ.ಆರ್‌. ಹಾಗೂ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ| ಎಸ್‌. ಎಲ್‌. ಬಾಲೇಹೊಸೂರ ಇದ್ದರು. ಕಾಲೇಜು ಮಂಡಳಿ ಸದಸ್ಯರಾದ ಬಸವರಾಜ ಮಾಸೂರ, ಜೆ.ಎಸ್‌.
ಅರಣಿ, ಎಸ್‌.ಎಂ.ಹುರಳಿಕುಪ್ಪಿ, ವಿಭಾಗದ ಮುಖ್ಯಸ್ಥ ಡಾ|ಎಂ.ಬಿ.ಯಾದಗುಡಿ ಇದ್ದರು.

Advertisement

ಸ್ವಾತಿ ಗೌಳಿ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ| ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ಪ್ರೊ| ಜಿ.ಎಸ್‌. ಬಾರ್ಕಿ ಪರಿಚಯಿಸಿದರು. ಪ್ರೊ| ರಿಷಿಕಾ ಡಿ. ನಿರ್ವಹಿಸಿದರು. ಪ್ರೊ| ಆರ್‌.ಬಿ. ಅಜರಡ್ಡಿ ವಂದಿಸಿದರು. ವಿಚಾರ ಸಂಕಿರಣದಲ್ಲಿ ಸುಮಾರು 43ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳ ಮಂಡನೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next