Advertisement

ಭದ್ರಾವತಿಯಲ್ಲಿ ಶಿವಮೊಗ್ಗದ ಆಟೋ ಚಾಲಕನ ಬರ್ಬರ ಹತ್ಯೆ

02:19 PM Oct 24, 2022 | Team Udayavani |

ಭದ್ರಾವತಿ: ಶಿವಮೊಗ್ಗದ ಆಟೋ ಚಾಲಕನನ್ನು ಭದ್ರಾವತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ‌.ರೂಪೇಶ್ ಕುಮಾರ್ (45) ಎಂಬಾತ ಹತ್ಯೆಯಾದ ವ್ಯಕ್ತಿಯಾಗಿದ್ದು,ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

Advertisement

ಎಪಿಎಂಸಿ ಬಳಿ ಘಟನೆ ನಡೆದಿದ್ದು, ದೊಣ್ಣೆಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಇದೆ. ಮೃತದೇಹದ ಪಕ್ಕದಲ್ಲಿ ರಕ್ತಸಿಕ್ತವಾದ ದೊಣ್ಣೆ ಪತ್ತೆಯಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ರೂಪೇಶ್ ಕುಮಾರ್ ಮೂಲತಃ ಹೊಳೆಹೊನ್ನೂರಿನವರು. ಶಿವಮೊಗ್ಗದಲ್ಲಿ ನೆಲೆಸಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಘಟನೆ ಸಂಬಂಧ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next