Advertisement

ಕರ್ಫ್ಯು ಹಿನ್ನೆಲೆ: ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ

11:25 AM May 14, 2021 | Team Udayavani |

ಬಂಟ್ವಾಳ: ಕರ್ಫ್ಯು ಹಿನ್ನೆಲೆಯಲ್ಲಿ ಬೆಳಗ್ಗೆ 9ರ ಬಳಿಕ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ, ಬಂಟ್ವಾಳ ತಾ.ಪಂ.ನಿಕಟಪೂರ್ವ ಸದಸ್ಯರೊಬ್ಬರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು ಎಂಬ ಕಾರಣಕ್ಕೆ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಆಮ್ಲಜನಕದಲ್ಲಿ ರಾಜ್ಯ ಸ್ವಾವಲಂಬನೆ ಯತ್ನ: ಟೋಪೆ

ಕಲ್ಲಡ್ಕದಲ್ಲಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಜೊತೆಗೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಿಕಟಪೂರ್ವ ಸದಸ್ಯರು ಕಾರಿನಲ್ಲಿ ಆಗಮಿಸಿದ್ದು, ಅವರ ಕಾರನ್ನು ತಡೆದು ವಿಚಾರಿಸಿದ್ದಾರೆ. ಜತೆಗೆ ಲಾಠಿ ತೋರಿಸಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದಾರೆ. ಬಳಿಕ ನಗರ ಠಾಣಾ ಪಿಎಸ್ಐ ಅವಿನಾಶ್ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next