Advertisement

ಅಮ್ಯೂಸ್‌ಮೆಂಟ್‌ ಪಾರ್ಕ್‌ ಸದ್ಬಳಕೆಯಾಗಲಿ: ಶೈನ್‌ ಶೆಟ್ಟಿ

12:58 AM Mar 09, 2020 | Sriram |

ಕೋಟೇಶ್ವರ: ಇಲ್ಲಿನ ಯುವ ಮೆರಿಡಿಯನ್‌ ಬೇ ರೆಸಾರ್ಟ್‌ ಸ್ಪಾ ಈಗಾಗಲೇ ಆತಿಥ್ಯ ಮತ್ತು ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರು
ತಿಸಲ್ಪಟ್ಟಿದೆ. ಈಗ ಇಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಶನಿವಾರ ಉದ್ಘಾಟನೆಯಾಗಿದ್ದು, ರೆಸಾರ್ಟ್‌ನ ಕೀರ್ತಿಯ ಮಕುಟಕ್ಕೆ ಮತ್ತೂಂದು ಗರಿ ಸೇರಿ ಕೊಂಡಿದೆ.

Advertisement

ಸಭಾ ಕಾರ್ಯಕ್ರಮ ಉದ್ಘಾಟಿ ಸಿದ ಬಿಗ್‌ ಬಾಸ್‌ ಶೋ ವಿಜೇತ ಕುಂದಾಪುರದ ಶೈನ್‌ ಶೆಟ್ಟಿ ಮಾತನಾಡಿ, ಯುವ ಮೆರಿಡಿಯನ್‌ ಆಡಳಿತನಿರ್ದೇಶಕರು ಗ್ರಾಮೀಣ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೊಟೇಲ್‌ ಆರಂಭಿಸಿ ಯಶಸ್ಸು ಗಳಿಸಿದ್ದಾರಲ್ಲದೆ, ಮಕ್ಕಳಿಂದ ಮೊದಲ್ಗೊಂಡು ಎಲ್ಲ ವಯೋಮಿತಿಯವರಿಗೆ ವಿಹಾರಕ್ಕಾಗಿ ಹೊಸತನದ ಅಮ್ಯೂಸ್‌ಮೆಂಟ್‌ ಪಾರ್ಕ್‌ ಒದಗಿಸಿದ್ದಾರೆ. ಸಾರ್ವಜನಿಕರಿಂದ ಇದರ ಉತ್ತಮ ಬಳಕೆಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಗ್‌ ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ,ವಾಸುಕಿ ವೈಭವ್‌, ದೀಪಿಕಾ ದಾಸ್‌, ಚಂದನಾ ಅನಂತಕೃಷ್ಣ ಶುಭ ಹಾರೈಸಿದರು.

ಯುವ ಮೆರಿಡಿಯನ್‌ ಆಡಳಿತ ನಿರ್ದೇಶಕರಾದ ಉದಯ ಕುಮಾರ ಶೆಟ್ಟಿ ಮತ್ತು ವಿನಯ ಕುಮಾರ ಶೆಟ್ಟಿ ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ಸಾಧನಾ ಉದಯಕುಮಾರ ಶೆಟ್ಟಿ, ವೈಶಾಲಿ ವಿನಯಕುಮಾರ ಶೆಟ್ಟಿ, ನಿಷ್ಠಾ ಎನ್‌. ಶೆಟ್ಟಿ, ಡಾ| ನಿಶ್ಚಿತ್‌ ಕುಮಾರ್‌, ವೈಷ್ಣವಿ, ಉದ್ಯಮಿ ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್‌. ಶೆಟ್ಟಿ ಶುಭಾಶಂಸನೆಗೈದರು. ನಯನಾ ಬೈಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next