Advertisement

ಇಂದು ಆದಿಚುಂಚನಗಿರಿಯಲ್ಲಿ ಅಮೂಲ್ಯ-ಜಗದೀಶ್‌ ವಿವಾಹ

09:59 AM May 12, 2017 | |

ನಾಗಮಂಗಲ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್‌ ಶುಕ್ರವಾರ ಸಪ್ತಪದಿ 
ತುಳಿಯಲಿದ್ದಾರೆ.

Advertisement

ಕಾಲಭೈರವೇಶ್ವರ ಸನ್ನಿಧಿಯ ಪ್ರಾಂಗಣದಲ್ಲಿ ಕುಟುಂಬ ವರ್ಗ ಹಾಗೂ ಕೆಲವು ಆತ್ಮೀಯರು ಸೇರಿ ದಂತೆ ಸುಮಾರು 300 ಮಂದಿ ಉಪಸ್ಥಿತಿಯಲ್ಲಿ ಅಮೂಲ್ಯ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಪುತ್ರ ಜಗದೀಶ್ ಜೊತೆ ಹಸೆಮಣೆ ಏರಲಿದ್ದಾರೆ. ಬಳಿಕ ಶ್ರೀಮಠದ ಬಿಜಿಎಸ್‌ ಸಭಾಂಗಣದಲ್ಲಿ ಸಂಬಂಧಿಕರು ಹಾಗೂ ಹಿತೈಷಿಗಳ ಪೋಟೋ ಶೂಟ್‌ ನಡೆಯಲಿದ್ದು, ಶ್ರೀಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾ ನಂದನಾಥ ಸ್ವಾಮೀಜಿ ಸೇರಿದಂತೆ ಗಣ್ಯರು ಅಮೂಲ್ಯ ಮದುವೆಗೆ ಸಾಕ್ಷಿಯಾಗಲಿದ್ದಾರೆ.

ನಟ ಗಣೇಶ್‌ ನಿವಾಸದಲ್ಲಿ ಬುಧವಾರ ನಡೆದ ಮೆಹಂದಿ ಕಾರ್ಯಕ್ರಮದ ನಂತರ ಆದಿಚುಂಚನಗಿರಿ ಆಗಮಿ ಸಿರುವ ವಧು-ವರರನ್ನು ಉಭಯ ಕುಟುಂಬಸ್ಥರು ಸಂಭ್ರಮದಿಂದ ಸ್ವಾಗತಿಸಿಕೊಂಡಿದ್ದು, ಗುರುವಾರ ಸಂಜೆ ವಿವಿಧ ಶಾಸ್ತ್ರೋಕ್ತ ಕಾರ್ಯ ಕ್ರಮಗಳ ತರುವಾಯ ಶುಕ್ರವಾರ ಬೆಳಗ್ಗೆ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next