Advertisement

APMCಗಳ ಖಾಸಗೀಕರಣ ಸುಗ್ರೀವಾಜ್ಞೆ ವಿರೋಧಿಸಿ ಹಮಾಲರಿಂದ ಪ್ರತಿಭಟನೆ

02:42 PM May 13, 2020 | sudhir |

ಗಂಗಾವತಿ: ರಾಜ್ಯದ ಎಪಿಎಂಸಿಗಳ ಖಾಸಗೀಕರಣ ವಿರುದ್ಧ ತಾಲೂಕಿನ ಶ್ರೀರಾಮನಗರದ ಎಪಿಎಂಸಿ ಕಚೇರಿ ಎದುರು ಹಮಾಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿ ಖಾಸಗೀಕರಣ ಮಾಡದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ರಡ್ಡಿ ಶ್ರೀನಿವಾಸ ಮಾತನಾಡಿ ರಾಜ್ಯ ಪಟ್ಟಿಯಲ್ಲಿರುವ ಕೃಷಿ ಎಪಿಎಂಸಿ ಹಾಗೂ ತೋಟಗಾರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಖಾಸಗಿ ಕಾರ್ಪೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೆ ಜನಪ್ರತಿನಿಧಿಗಳನ್ನು ರೈತರು ಕೃಷಿ ಕೂಲಿಕಾರ್ಮಿಕರನ್ನು‌ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ನಿಯಮ 8 ಕೈ ಬಿಡುವ ಮೂಲಕ ಕೃಷಿಕರಿಗೆ ಅನ್ಯಾಯ ಮಾಡಲಾಗುತ್ತದೆ ಎಂದರು. ರೈತರ ಬೆಳೆ ಖರೀದಿಗೆ ಎಪಿಎಂಸಿ ಲೈಸೆನ್ಸ್ ಇದ್ದವರು ಮಾತ್ರ ಅರ್ಹರಾಗಿದ್ದು ಈ ನಿಯಮ ಕೈ ಬಿಡುವ ಮೂಲಕ ಖಾಸಗಿ ಕಂಪನಿ ಎಪಿಎಂಸಿ ಒಳಗೆ ಬಂದು ರೈತರು ಕಾರ್ಮಿಕರು ಮತ್ತು‌ವರ್ತಕರನ್ನು ಶೋಷಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ರಾಜ್ಯದ್ಯಾಂತ ಹೋರಾಟ ಮಾಡಲಾಗುತ್ತದೆ ಎಂದರು.

ಶ್ರೀ ರಾಮನಗರ ಗಂಜ್ ಬಜಾರ್ ಹಮಾಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next