Advertisement

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

07:26 PM Sep 19, 2024 | Team Udayavani |

ಸಿದ್ದಾಪುರ: ಅಂಪಾರಿನ ರೆಸ್ಟೋರೆಂಟ್‌ ಒಂದಕ್ಕೆ ಬಂದಿದ್ದ ಆರೋಪಿಗಳು ಕ್ಯಾಶಿಯರ್‌ ಮತ್ತವರ ಸಹೋದರನಿಗೆ ಹಾಗೂ ಸಪ್ಲಾಯರ್‌ಗಳಿಗೆ ಹಲ್ಲೆ ಮಾಡಿದ ಪ್ರಕರಣ ನಡೆದಿದೆ.

Advertisement

ಈ ಬಗ್ಗೆ ಕ್ಯಾಶಿಯರ್‌ ಸುಜಯ್‌ ಸಹೋದರ ಅಜಯ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಜಯ್‌ ಅವರು ಸೆ. 18ರ ರಾತ್ರಿ ರೆಸ್ಟೋರೆಂಟ್‌ನ ಕ್ಯಾಶಿಯರ್‌ ಆಗಿರುವ ಸಹೋದರ ಸುಜಯ್‌ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಾದ ಅಭಿ, ಹರೀಶ್‌, ಪ್ರಜ್ವಲ್‌, ಸ್ವರಾಜ್‌ ಮತ್ತು ಇನ್ನೋರ್ವ ವ್ಯಕ್ತಿ ಅಜಯ್‌ ಮತ್ತು ಕ್ಯಾಶಿಯರ್‌ ಸುಜಯ್‌ ಅವರಿಗೆ ಹಲ್ಲೆ ಮಾಡಿದ್ದರು. ಆರೋಪಿ ಸ್ವರಾಜ್‌ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಮತ್ತೋರ್ವ ಕ್ಯಾಶಿಯರ್‌ ಸೀತಾರಾಮ ಮತ್ತು ಸಪ್ಲಾಯರ್‌ಗಳು ಹೆಚ್ಚಿನ ಗಲಾಟೆಯನ್ನು ತಪ್ಪಿಸಿದ್ದರು. ಅನಂತರ ಆರೋಪಿಗಳು ಬೆದರಿಕೆಯನ್ನೂ ಹಾಕಿ ಹೋಗಿದ್ದಾರೆ ಎಂದು ಅಜಯ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next