Advertisement

ರಾಜಸ್ಥಾನದ ಜನಪ್ರಿಯ ಯೂಟ್ಯೂಬರ್ ಅಮಿತ್ ಶರ್ಮಾಗೆ ಹಾವು ಕಡಿತ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

06:10 PM Dec 29, 2022 | Team Udayavani |

ನವದೆಹಲಿ: ರಾಜಸ್ಥಾನದ ಜನಪ್ರಿಯ ಯೂಟ್ಯೂಬರ್ ಅಮಿತ್ ಶರ್ಮಾಗೆ ವಿಷಪೂರಿತ ಹಾವು ಕಡಿದ ಪರಿಣಾಮ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ರಾಕ್ಷಸರ ವಿಕೃತಿ ; ಪಾಕಿಸ್ಥಾನದಲ್ಲಿ ಹಿಂದೂ ಮಹಿಳೆಯ ಗ್ಯಾಂಗ್ ರೇಪ್ ಮಾಡಿ ಶಿರಚ್ಛೇದ

ಮಾಧ್ಯಮದ ವರದಿಯ ಪ್ರಕಾರ, ಅಮಿತ್ ಶರ್ಮಾ ಅಂಗೈಗೆ ಹಾವು ಕಡಿದಿದ್ದು, ವಿಷದ ದೇಹದ ಎಲ್ಲಾ ಅಂಗಗಳಿಗೂ ಹರಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದೆ.

ಅಮಿತ್ ಶರ್ಮಾ ಅವರ ಯೂಟ್ಯೂಬ್ ಚಾನೆಲ್ ಕ್ರೆಝಿ ಎಕ್ಸ್ ವೈಝಡ್ ಸುಮಾರು 25 ಲಕ್ಷಕ್ಕೂ ಅಧಿಕ ಸಬ್ಸ್ ಕ್ರೈಬರ್ ಅನ್ನು ಹೊಂದಿದ್ದು, ರಾಜಸ್ಥಾನದಲ್ಲಿ ಅತೀ ಹೆಚ್ಚು ಆದಾಯಗಳಿಸುತ್ತಿರುವ ಯೂಟ್ಯೂಬ್ ಚಾನೆಲ್ ಎಂಬ ಖ್ಯಾತಿ ಪಡೆದಿದೆ.

ಅಮಿತ್ ಶರ್ಮಾ ರಾಜಸ್ಥಾನ್ ಅಲ್ವಾರ್ ನ ಬಾನ್ಸುರ್ ನಿವಾಸಿಯಾಗಿದ್ದು, ಐಐಟಿ ರೂರ್ಕಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಆದರೆ ಅಮಿತ್ 2017ರಲ್ಲಿ ತಮ್ಮ ಕ್ರೆಝಿ ಎಕ್ಸ್ ವೈಝಡ್ ಯೂಟ್ಯೂಬ್ ಚಾನೆಲ್ ಆರಂಭಿಸಿದ ನಂತರ ಅವರ ಬದುಕಿನ ದಿಕ್ಕು ಬದಲಾಗಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next