Advertisement

ಪಕ್ಷದ ನಾಗಾಲೋಟಕ್ಕೆ ನಿಮ್ಮಿಂದ ತಡೆಯಾಗುತ್ತಿದೆ:ಶಾ ತರಾಟೆ ?

12:39 PM Aug 13, 2017 | |

ಬೆಂಗಳೂರು: ರಾಜ್ಯದಲ್ಲಿ 3 ದಿನಗಳ ಪ್ರವಾಸದಲ್ಲಿರುವ  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ, ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌.ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಖಡಕ್‌ ಎಚ್ಚರಿಕೆ ನೀಡಿರುವ ಕುರಿತು ವರದಿಯಾಗಿದೆ. 

Advertisement

ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್‌ ಮೇಲೆ  ಹಲ್ಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ  ಅವರ ಆಪ್ತ ಸಹಾಯಕ ಸಂತೋಷ್‌ರ ವಿಚಾರಣೆ ವಿಚಾರ ಮತ್ತು ಮತ್ತೆ ಭಿನ್ನಮತ ಪುನಾರಾವರ್ತನೆಯಾಗದಂತೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ನಿಮ್ಮ ಪಿಎಗಳ ನಡುವಿನ ಜಗಳ ಮತ್ತು ಸಣ್ಣ ವಿಚಾರಗಳಿಗಾಗಿ ಭಿನ್ನಮತ ತೋರಿದರೆ ಪಕ್ಷದ ನಾಗಾಲೋಟಕ್ಕೆ ತಡೆಯಾಗುತ್ತದೆ. ಕಾಂಗ್ರೆಸ್‌ ಇದನ್ನೇ ಅಸ್ತ್ರವನ್ನಾಗಿಸುತ್ತದೆ. ಇಂತಹದ್ದು ಪುನಾರಾವರ್ತನೆಯಾಗಬಾರದು. ಹಾಗೇನಾದರೂ ಆದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

Advertisement

Udayavani is now on Telegram. Click here to join our channel and stay updated with the latest news.

Next