Advertisement

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆದು ಭಾಷಣ ಮಾಡಿದ ಗ್ರಹ ಸಚಿವ ಶಾ!

02:47 PM Oct 25, 2021 | Team Udayavani |

ಶ್ರೀನಗರ : ಉಗ್ರರ ನಿರಂತರ ದಾಳಿಗೆ ಗುರಿಯಾಗುತ್ತಿರುವ ಕಾಶ್ಮೀರದಲ್ಲಿ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಭಾಷಣ ಮಾಡುವ ವೇಳೆ ಪೋಡಿಯಂ ಸುತ್ತ ಹಾಕಲಾಗಿದ್ದ ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ತೆಗೆಸಿದ ಘಟನೆ ಸೋಮವಾರ ನಡೆದಿದೆ.

Advertisement

ಶೇರ್-ಐ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಾ ಅವರು ಮಾತನಾಡುವ ವೇಳೆ , ”ನನ್ನನ್ನು ನಿಂದಿಸಲಾಯಿತು, ಖಂಡಿಸಲಾಯಿತು. ಇಂದು ನಾನು ನಿಮ್ಮೊಂದಿಗೆ ಸ್ಪಷ್ಟವಾಗಿ ಮಾತನಾಡಲು ಬಯಸುತ್ತೇನೆ, ಅದಕ್ಕಾಗಿಯೇ ಇಲ್ಲಿ ಯಾವುದೇ ಬುಲೆಟ್ ಪ್ರೂಫ್ ಅಥವಾ ಭದ್ರತೆಯ ಅಗತ್ಯ ಇಲ್ಲ” ಎಂದರು.

”ಫಾರೂಕ್ ಸಾಹೇಬರು ಪಾಕಿಸ್ತಾನದ ಜೊತೆ ಮಾತನಾಡಲು ನನಗೆ ಸೂಚಿಸಿದ್ದರು. ಆದರೆ, ನಾನು ಕಣಿವೆಯ ಯುವಕರು ಮತ್ತು ಜನರೊಂದಿಗೆ ಮಾತನಾಡುತ್ತೇನೆ” ಎಂದರು.

ಆರ್ಟಿಕಲ್ 370 ರದ್ದುಪಡಿಸಿದ ಬಳಿಕ ಶಾ ಅವರು ಮೊದಲ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಮೂರು ದಿನಗಳ ಪ್ರವಾಸದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next