Advertisement

ವಿಸ್ತರಣೆ ಅನಿಶ್ಚಿತತೆ? ಅಮಿತ್‌ ಶಾ ಜತೆ ಫ‌ಲ ಕೊಡದ ಚರ್ಚೆ

12:42 AM Dec 15, 2022 | Team Udayavani |

ಬೆಂಗಳೂರು/ಹೊಸದಿಲ್ಲಿ:  ಬೆಳಗಾವಿ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕು ಎಂಬ ಸಚಿವಾಕಾಂಕ್ಷಿಗಳ ಒತ್ತಡ ಈ ಬಾರಿಯೂ ನೆರವೇರುವ ಲಕ್ಷಣಗಳಿಲ್ಲ.

Advertisement

ಗಡಿ ವಿಷಯ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕರೆದಿದ್ದ ಸಂಧಾನಸಭೆಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆಯೂ ಶಾ ಅವರೊಂದಿಗೆ ಚರ್ಚಿಸಿದರು. ಅಮಿತ್‌ ಶಾ ಅವರು  ಸಂಪುಟ ವಿಸ್ತರಣೆಯ ಸಾಧಕ-ಬಾಧಕ

ಗಳ ಬಗ್ಗೆ ಚರ್ಚಿಸಿದ್ದು, ಮತ್ತೂಮ್ಮೆ ಸಮಯ ಕೊಡುವುದಾಗಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗಲಿದೆಯೇ ಎಂಬ ಪ್ರಶ್ನೆಗೂ ಉತ್ತರಿಸಿರುವ ಬೊಮ್ಮಾಯಿ, ಕಾದು ನೋಡೋಣ ಎಂದಷ್ಟೇ ಹೇಳಿದ್ದಾರೆ.

ಈಶ್ವರಪ್ಪ, ರಮೇಶ್‌ ಜಾರಕಿಹೊಳಿ, ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಜತೆಗೆ ಆರು ಸಚಿವರನ್ನು ಸಂಘಟನೆಗೆ ನಿಯೋಜಿಸಿ ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಶಾ ಭೇಟಿಗೆ ತೆರಳಿದ ವಿಜಯೇಂದ್ರ
ವಿಜಯೇಂದ್ರ ಅವರು ದಿಲ್ಲಿಗೆ ತೆರಳಿದ್ದು, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಅಮಿತ್‌ ಶಾ ಭೇಟಿಗೆ ಅವಕಾಶ ಕೇಳಿದ್ದಾರೆ. ಬಿಜೆಪಿಯ ಇತರ ಕೆಲವು ಹಿರಿಯ ನಾಯಕರರೂ ಭೇಟಿಗೂ ಅವಕಾಶ ಕೇಳಿದ್ದಾರೆ ಎನ್ನ‌ಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next