Advertisement

ಹುತಾತ್ಮ ಪೊಲೀಸ್‌ ಅಧಿಕಾರಿ ಅರ್ಷದ್‌ ಖಾನ್‌ ನಿವಾಸಕ್ಕೆ ಅಮಿತ್‌ ಶಾ

10:26 AM Jun 28, 2019 | Team Udayavani |

ಶ್ರೀನಗರ: ಅನಂತ್‌ನಾಗ್‌ನಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾಗಿದ್ದ ಪೊಲೀಸ್‌ ಅಧಿಕಾರಿ ಅರ್ಷದ್‌ ಖಾನ್‌ ಅವರ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ಭೇಟಿ ನೀಡಿದರು.

Advertisement

2 ದಿನಗಳ ಕಾಶ್ಮೀರ ಭೇಟಿಯಲ್ಲಿರುವ ಶಾ ಅವರು, ಎಸ್‌ಎಚ್‌ಓ ಅರ್ಷದ್‌ ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.ಬಲಿದಾನವನ್ನು ವ್ಯರ್ಥ ಮಾಡಲು ಅವಕಾಶ ನೀಡುವುದಿಲ್ಲ, ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ.

ಜೂನ್‌ 12 ರಂದು ಅನಂತ್‌ನಾಗ್‌ನ ಕೆ.ಪಿ.ರೋಡ್‌ನ‌ಲ್ಲಿ ನಡೆದ ಇಬ್ಬರು ಉಗ್ರನೊಂದಿಗಿನ ಗುಂಡಿನ ಕಾಳಗದಲ್ಲಿ ಅರ್ಷದ್‌ ಹುತಾತ್ಮರಾಗಿದ್ದರು. ದಾಳಿಯಲ್ಲಿ ಅರ್ಷದ್‌ ಸೇರಿ ಐವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next