Advertisement

ಬುದ್ಧಿಜೀವಿಗಳ ಇಬ್ಬಗೆ ನೀತಿ: ಬಿಜೆಪಿ ಆಂದೋಲನ

03:00 AM Jul 12, 2017 | Team Udayavani |

ಕೋಲ್ಕತಾ: ಪಶ್ಚಿಮಬಂಗಾಲದಲ್ಲಿ ಕೆಲವು ಬುದ್ಧಿಜೀವಿಗಳ ಇಬ್ಬಗೆ ನೀತಿಯ ವಿರುದ್ಧ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಆಂದೋಲನ ನಡೆಸಲು ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ ಹೇಳಿದ್ದಾರೆ. ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ಜನರು ಉತ್ತರ ಪರಗಣ ಜಿಲ್ಲೆಯಲ್ಲಿನ ಬಸಿರ್‌ಹಾಟ್‌ ಗಲಭೆಯ ಬಗ್ಗೆ ಯಾಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸದೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಯೋಗಿ ಆದಿತ್ಯನಾಥ್‌ ಯುಪಿ ಸಿಎಂ ಆಗಿರುವುದನ್ನು ಸಹಿಸದೆ, ಖಂಡಿಸಿ ಕವಿತೆ ಬರೆಯುತ್ತಾರೆ. ಆದರೆ ಬಹುಸಂಖ್ಯಾತರನ್ನು ಗುರಿ ಮಾಡಿ ದಾಳಿ ಮಾಡಿದಾಗ ಇವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಇಬ್ಬಗೆ ನೀತಿ ಅನುಸರಿಸುತ್ತಾರೆ ಎಂದೂ ಕಿಡಿಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next