Advertisement

ಆಂಬುಲೆನ್ಸ್‌ ದುರುಪಯೋಗ: ವಿದ್ಯಾರ್ಥಿನಿಯರಿಗಾಗಿ ಸೈರನ್‌!

12:03 PM Oct 05, 2017 | Team Udayavani |

ಬೆಂಗಳೂರು: ಅಂಬುಲೆನ್ಸ್‌ ಸೈರನ್‌ ಹೊಡೆಯುತ್ತಾ ಬಂದರೆ ವಾಹನ ಸವಾರರು ದಾರಿ ಮಾಡಿ ಕೊಡುವುದು ಸಹಜ. ಸಾರ್ವಜನಿಕರ ಸಹಾನೂಭೂತಿಯನ್ನೇ ದುರುಪಯೋಗ ಪಡಿಸಿಕೊಂಡ ಚಾಲಕನೊಬ್ಬನ ವಿರುದ್ಧ ಟ್ರಾಫಿಕ್‌ ಪೊಲೀಸರು ಕೆಂಡಾಮಂಡಲವಾದ ಘಟನೆ ಗುರುವಾರ ಮಲ್ಲೇಶ್ವರಂನಲ್ಲಿ ನಡೆದಿದೆ. 

Advertisement

ಜೋರಾಗಿ ಸೈರನ್‌ ಹೊಡೆದುಕೊಂಡು ಬರುತ್ತಿದ್ದ ಆಂಬುಲೆನ್ಸ್‌ನಲ್ಲಿ  ವಿದ್ಯಾರ್ಥಿಗಳು ಇರುವುದು ಕಂಡು  ಟ್ರಾಫಿಕ್‌ ಪೊಲೀಸರು ಪರಿಶೀಲನೆಗಿಳಿದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಇರುವುದು ಕಂಡು, ರೋಗಿ ಇಲ್ಲ ಆದರೂ ಸೈರನ್‌ ಯಾಕೆ ಹಾಕುತ್ತಿದ್ದೀಯಾ ಎಂದು ಸಾರ್ವಜನಿರಕ ಸಮ್ಮುಖದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನೂ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್‌..ನಮಗೆ ಎಕ್ಸಾಂ ಇದೆ ಅದಕ್ಕಾಗಿ ಸೈರನ್‌ ಹಾಕಿದ್ದು ಎಂದಾಗ ..ಎಕ್ಸಾಂ ಇದ್ರೆ ಬೆಳಗ್ಗೆ 6 ಗಂಟೆಗೆ ಎದ್ದು  ಹೋಗ್ರಿ..ಜನರ ಸಿಂಪಥಿ ಪಡೆದು ಯಾಕಯ್ಯಾ ಹೀಗೆ ಮಾಡ್ತೀರಿ ಎಂದು ಕೆಂಡಾಮಂಡಲವಾದರು. 

ಚಾಲಕನಿಗೆ ‘ಎನೋ ಹುಡ್ಗೀರ್ನಾ ಕರ್ಕೊಂಡ್‌ ಹೋಗ್ಲಿಕ್ಕೆ ನಿನ್ಗೆ ಸೈರನ್‌ ಬೇಕಲ್ಲಾ…ಇನ್ನೆಲ್ಲಾದ್ರೂ ಹಿಂಗ್‌ ಮಾಡಿದ್ರೆ ಜೈಲ್‌ಗೇ ಕಳುಹಿಸ್ತೀನಿ ಹುಷಾರ್‌..’ ಎಂದು ಎಚ್ಚರಿಕೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next