Advertisement

ಶಿರೂರು: ಟೋಲ್‌ ನಲ್ಲಿ ಪಲ್ಟಿಯಾದ ಅಂಬ್ಯುಲೆನ್ಸ್‌ : ಗಂಭೀರ ಗಾಯಗೊಂಡಿದ್ದ ಮೂವರು ಸಾವು

08:50 PM Jul 20, 2022 | Team Udayavani |

ಶಿರೂರು: ಅತಿವೇಗದಿಂದ ಬಂದ ಅಂಬ್ಯುಲೆನ್ಸ್‌ ವೊಂದು ಟೋಲ್‌ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಶಿರೂರು ಟೋಲ್‌ ಗೇಟ್‌ ನಲ್ಲಿ ಬುಧವಾರ ನಡೆದಿದೆ.

Advertisement

ಹೊನ್ನಾವರದಿಂದ ಕುಂದಾಪುರದ ಆಸ್ಪತ್ರೆಗೆ ರೋಗಿಯನ್ನು ಕರೆ ತರುವ ವೇಳೆ ಅತಿವೇಗದಿಂದ ಬಂದ ಅಂಬ್ಯುಲೆನ್ಸ್‌  ಶಿರೂರು ಟೋಲ್‌ ಗೇಟ್‌ ಬಳಿ ಚಾಲಕನ  ನಿಯಂತ್ರಣ ತಪ್ಪಿ ಟೋಲ್‌ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಅಂಬ್ಯುಲೆನ್ಸ್‌ ನಲ್ಲಿ ಹೊನ್ನಾವರದ ಆಸ್ಪತ್ರೆಯಿಂದ ಲೋಕೇಶ್ ಮಾದೇವ ನಾಯ್ಕ ಎನ್ನುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರಲ್ಲಿ ಅವರೂ ಸೇರಿದ್ದು ಅವರ ಕುಟುಂಬಿಕರಾದ ಜ್ಯೋತಿ ಲೋಕೇಶ ನಾಯ್ಕ, ಗಜಾನನ ಲಕ್ಷ್ಮಣ ನಾಯ್ಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಉಳಿದಂತೆ ಅಂಬುಲೆನ್ಸ್ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದು ಮಂಜುನಾಥ ಎನ್ನುವವರು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

.

.

Advertisement

.

 

Advertisement

Udayavani is now on Telegram. Click here to join our channel and stay updated with the latest news.

Next