Advertisement

ಕೇರಳದಲ್ಲಿ ಆ್ಯಂಬುಲೆನ್ಸ್‌ ಅಪಘಾತ: 8 ಸಾವು

12:14 AM Jun 10, 2019 | Sriram |

ಪಾಲಕ್ಕಾಡ್‌: ಮೀನುಗಳನ್ನು ಹೊತ್ತೂಯ್ಯುತ್ತಿದ್ದ ವ್ಯಾನೊಂದಕ್ಕೆ ತುರ್ತು ಸೇವೆಯಲ್ಲಿದ್ದ ಆ್ಯಂಬುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಮತಪ್ಟಟಿರುವ ಘಟನೆ ಪಾಲಕ್ಕಾಡ್‌ ಜಿಲ್ಲೆಯ ಥನ್ನಿಸ್ಸೆರ್ರಿಯಲ್ಲಿ ರವಿವಾರನಡೆದಿದೆ.

ಒಟ್ಟು 12 ಮಂದಿ ಇದ್ದರೆಂದು ಹೇಳಲಾಗಿದ್ದು, ಮೃತರಲ್ಲಿ ಆ್ಯಂಬುಲೆನ್ಸ್‌ ಚಾಲಕನೂ ಸೇರಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳ ಹಿಂದೆ ನೆಲ್ಲಿಯಾಂಪಥಿ ಕಡೆಗೆ ಹೋಗುತ್ತಿದ್ದ ವಾಹನವೊಂದು ಲಘು ಅಪಘಾತಕ್ಕೀಡಾಗಿ, ಅದರಲ್ಲಿದ್ದ ಪ್ರವಾಸಿಗರಿಗೆ ಗಾಯಗಳಾಗಿದ್ದವು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಬಂದ ಆ್ಯಂಬುಲೆನ್ಸ್‌ನಲ್ಲಿ ಗಾಯಾಳುಗಳ ಜತೆಗೆ ಅವರ ಸಂಬಂಧಿಕರೂ ಹತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next