Advertisement

ಅಂಬಿ ನಿಂಗ್‌ ವಯಸ್ಸಾಯ್ತೋ ಮರು ಬಿಡುಗಡೆ

11:39 AM Nov 27, 2018 | |

ಅಂಬರೀಶ್‌ ಇನ್ನಿಲ್ಲ ಎಂಬುದನ್ನು ಯಾವೊಬ್ಬ ಅಭಿಮಾನಿಯೂ ಒಪ್ಪುವುದಿಲ್ಲ. ಅಂಬರೀಶ್‌ ಅಭಿಮಾನಿಗಳ ಮನದಲ್ಲಿ ಸದಾ ರಾರಾಜಿಸುತ್ತಲೇ ಇದ್ದಾರೆ. ಅಂಬರೀಶ್‌ ತಮ್ಮ ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ. ಅಂಬರೀಶ್‌ ಅಭಿನಯದ ಕೊನೆಯ ಚಿತ್ರ “ಅಂಬಿ ನಿಂಗ್‌ ವಯಸ್ಸಾಯ್ತೋ’ ಸಿನಿಮಾವನ್ನು ಜನ ಒಪ್ಪಿ, ಅಪ್ಪಿದ್ದರು. ಈಗ ಪುನಃ ಆ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.

Advertisement

ಈ ಹಿನ್ನೆಲೆಯಲ್ಲಿ ನಿರ್ಮಾಪಕ ಜಾಕ್‌ಮಂಜು ಅವರು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಹೌದು, ಹೊರದೇಶದ ಅಭಿಮಾನಿಗಳ ಒತ್ತಾಯದ ಹಿನ್ನೆಲೆಯಲ್ಲಿ ಚಿತ್ರವನ್ನು ವಿದೇಶದಲ್ಲೂ ಬಿಡುಗಡೆ ಮಾಡುವುದರ ಜೊತೆಗೆ, ಮಂಡ್ಯ, ಮೈಸೂರು ಸೇರಿದಂತೆ ಇನ್ನಿತರ ಕಡೆ ಚಿತ್ರವನ್ನು ಮರುಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವುದಾಗಿ ನಿರ್ಮಾಪಕ ಜಾಕ್‌ಮಂಜು “ಉದಯವಾಣಿ’ಗೆ ತಿಳಿಸಿದ್ದಾರೆ.

ಅಂದಹಾಗೆ, “ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರದ ಬಿಡುಗಡೆ ನಂತರ ಬರುವ ಹಣವನ್ನು ಬಡವರ ಕಲ್ಯಾಣಕ್ಕೆ ವಿನಿಯೋಗಿಸುವುದಾಗಿಯೂ ಜಾಕ್‌ಮಂಜು ಹೇಳಿದ್ದಾರೆ. ಅಂಬರೀಶ್‌ ಮೊದಲಿನಿಂದಲೂ ಅದೆಷ್ಟೋ ಜನರಿಗೆ ಸಹಾಯ ಮಾಡಿಕೊಂಡು ಬಂದವರು. ಹಾಗಾಗಿ, ಅವರ ಅಭಿನಯದ ಕೊನೆಯ ಚಿತ್ರ “ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರವನ್ನು ಮರುಬಿಡುಗಡೆ ಮಾಡಿ, ಅದರಿಂದ ಬಂದಂತಹ ಹಣವನ್ನು ಬಡವರಿಗೆ ವಿನಿಯೋಗಿಸಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next